ಆಕಸ್ಮಿಕ ಬೆಂಕಿ ಅವಘಡ ; ಕೊಟ್ಟಿಗೆಯಲ್ಲಿ ಸಂಗ್ರಹಿಸಿದ್ದ 600 ಕ್ಕೂ ಅಧಿಕ ಹುಲ್ಲಿನ ಪೆಂಡಿಗಳು ಸುಟ್ಟು ಭಸ್ಮ !
ಹೊಸನಗರ : ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿ ಕೊಟ್ಟಿಗೆ ಮನೆಯಲ್ಲಿದ್ದ 600ಕ್ಕೂ ಹೆಚ್ಚಿನ ಹುಲ್ಲಿನ ಪೆಂಡಿಗಳು ಸುಟ್ಟು ಭಸ್ಮವಾದ ಘಟನೆ ತಾಲೂಕಿನ ಮಾರುತಿಪುರ ಗ್ರಾಪಂ ವ್ಯಾಪ್ತಿಯ ಸೋರೆಕೊಪ್ಪ ಗ್ರಾಮದಲ್ಲಿ ನಡೆದಿದೆ.
ಸೋರೆಕೊಪ್ಪ ನೆಲಗಳಲೆ ಗ್ರಾಮದ ಕೃಷಿಕ ಸಂತೋಷ್ ಎಂಬುವವರಿಗೆ ಸೇರಿದ ಕೊಟ್ಟಿಗೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಳಿಕ ಕೆಲವೇ ಕ್ಷಣಗಳಲ್ಲಿ ಬೆಂಕಿ ಕೆನ್ನಾಲಿಗೆಗೆ 600 ಕ್ಕೂ ಹೆಚ್ಚು ಹುಲ್ಲಿನ ಪೆಂಡಿಗಳು ಸುಟ್ಟು ಭಸ್ಮವಾಗಿದೆ.
ತಕ್ಷಣ ಸ್ಥಳೀಯರ ಪ್ರಯತ್ನದಿಂದ ಬೆಂಕಿ ನಂದಿಸಲಾಯಿತಾದರೂ ಸಂಪೂರ್ಣ ಹುಲ್ಲು ಬೆಂಕಿಗಾಹುತಿಯಾಗಿದೆ.
ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.