ಹರತಾಳು ಹಾಲಪ್ಪಗೆ ಶುಭ ಹಾರೈಸಿದ ಮಾಜಿ ಶಾಸಕ ಬಿ.ಸ್ವಾಮಿರಾವ್

0 215

ಹೊಸನಗರ : ಇತ್ತೀಚೆಗೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಸ್ಥಾನಕ್ಕೆ ನೇಮಕಗೊಂಡ ಮಾಜಿ ಸಚಿವ, ಎಂಎಸ್‌ಐಎಲ್ ಸಂಸ್ಥೆಯ ಮಾಜಿ ಅಧ್ಯಕ್ಷ ಹರತಾಳು ಹಾಲಪ್ಪ ಅವರನ್ನು ಬೆಂಗಳೂರಿನ ಅವರ ನಿವಾಸದಲ್ಲಿ ಹೊಸನಗರದ ಮಾಜಿ ಶಾಸಕ, ಬಿಜೆಪಿ ಮುಖಂಡ ಬಿ. ಸ್ವಾಮಿರಾವ್ ಸೊನಲೆ ಭೇಟಿ ಮಾಡಿ ಶುಭ ಕೋರಿದರು.

ನಂತರ ಹರತಾಳು ಹಾಲಪ್ಪ ಮಾತನಾಡಿ, ಶೀಘ್ರದಲ್ಲೇ ಶಿವಮೊಗ್ಗ ಜಿಲ್ಲೆಗೆ ಭೇಟಿ ನೀಡಿ ಪಕ್ಷ ಸಂಘಟನೆಗಾಗಿ ಹಲವು ಕಾರ್ಯಕ್ರಮ ರೂಪಿಸುವುದಾಗಿ ತಿಳಿಸಿದರು. ಈ ವೇಳೆ ಪ್ರಮುಖರಾದ ಷಾಬುದ್ದೀನ್, ಶರತ್ ಶೆಟ್ಟಿ ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!