ಜಸ್ಟ್ ಎರಡೇ ನಿಮಿಷದಲ್ಲಿ 8 ಕೊಟ್ಟೆ ಕಡಬು, ಬಾಳೆಹಣ್ಣು ತಿಂದು ಬಹುಮಾನ ಗೆದ್ದವರಿವರು

0 375

ಶಿವಮೊಗ್ಗ: ನಗರದ ಶಿವಪ್ಪ ನಾಯಕ ವೃತ್ತದಲ್ಲಿ ಸೋಮವಾರ ಮಹಾನಗರ ಪಾಲಿಕೆ ವತಿಯಿಂದ ದಸರಾ ಅಂಗವಾಗಿ ನಡೆದ ಆಹಾರ ದಸರಾ-2023ರ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ 2 ನಿಮಿಷದಲ್ಲಿ ಕೊಟ್ಟ ಕಡುಬು ಅವರೇಕಾಳು ಸಾಂಬಾರ್ ತಿನ್ನುವ ಸ್ಪರ್ಧೆಗೆ ಶಾಸಕ ಎಸ್.ಎನ್. ಚನ್ನಬಸಪ್ಪ ಸಾಂಕೇತಿಕ ಚಾಲನೆ ನೀಡಿದರು.


ಈ ಸ್ಪರ್ಧೆಯಲ್ಲಿ ಮಹಿಳೆಯರಲ್ಲಿ 8 ಕೊಟ್ಟೆ ಕಡುಬು ತಿಂದ ಶಿವಮ್ಮ ಪ್ರಥಮ, ಜ್ಯೋತಿ ಶ್ರೀನಿವಾಸ ದ್ವಿತೀಯ, ಗೀತಾ ತೃತೀಯ ಬಹುಮಾನ ಪಡೆದರು.


ಪುರುಷರಲ್ಲಿ 6 ಕೊಟ್ಟೆ ಕಡುಬು ತಿಂದ ವಿನೋದ್ ಪ್ರಥಮ, ರವಿಕಿರಣ್ ದ್ವಿತೀಯ, ನಾಗರಾಜ್ ತೃತೀಯ ಬಹುಮಾನ ಪಡೆದರು.


ಬಾಳೆಹಣ್ಣು ತಿನ್ನುವ ಸ್ಪರ್ಧೆಯಲ್ಲಿ ಕೆ.ಎನ್. ಗೀತಾ 8 ಬಾಳೆಹಣ್ಣು ತಿಂದು ಪ್ರಥಮ, ಸುಜಾತಾ ಎ.ಎನ್. ದ್ವಿತೀಯ, ತೃತೀಯ ಬಹುಮಾನ ಉಷಾ ಪಡೆದಿದ್ದಾರೆ.
ಪುರುಷರಲ್ಲಿ ದೀಪಕ್ ಶೆಟ್ಟಿ 7 ಬಾಳೆಹಣ್ಣು ತಿಂದು ಪ್ರಥಮ ಸ್ಥಾನ, ಮಧು ದ್ವಿತೀಯ, ರಾಜಶೇಖರ್ ತೃತೀಯ ಬಹುಮಾನ ಪಡೆದರು.


ಈ ಸಂದರ್ಭದಲ್ಲಿ ಮೇಯರ್ ಶಿವಕುಮಾರ್, ಉಪಮೇಯರ್ ಲಕ್ಷ್ಮಿ ಶಂಕರ ನಾಯಕ, ಜ್ಞಾನೇಶ್ವರ್, ಸುನೀತಾ ಅಣ್ಣಪ್ಪ, ಯಮುನಾ ರಂಗೇಗೌಡ, ಸುವರ್ಣಾ ಶಂಕರ್, ಆಹಾರ ದಸರಾ ಸಮಿತಿ ಅಧ್ಯಕ್ಷೆ ಆಶಾ ಚಂದ್ರಪ್ಪ, ಸದಸ್ಯರಾದ ಬಾನುಮತಿ, ವಿನೋದ್‌ಕುಮಾರ್, ಆರತಿ ಆ.ಮಾ. ಪ್ರಕಾಶ್ ಮತ್ತಿತರರಿದ್ದರು.

Leave A Reply

Your email address will not be published.

error: Content is protected !!