ರಾಷ್ಟ್ರೀಯ ಖೇಲೋ ಇಂಡಿಯಾ ಕಬ್ಬಡಿ ತಂಡಕ್ಕೆ ರಿಪ್ಪನ್‌ಪೇಟೆ ವಿದ್ಯಾರ್ಥಿ ಆಯ್ಕೆ

0 2,279

ರಿಪ್ಪನ್‌ಪೇಟೆ : ಇತ್ತೀಚೆಗೆ ಉಡುಪಿಯಲ್ಲಿ (Udupi) ನಡೆದ ಆಲ್ ಇಂಡಿಯಾ ಅಂತರ ವಿಶ್ವವಿದ್ಯಾನಿಲಯದ ಖೇಲೋ ಕಬ್ಬಡಿ ಪಂದ್ಯಾವಳಿಯಲ್ಲಿ ಆ ಪ್ರತಿಮಾ ಸಾಧನೆ ತೋರಿ ಚಿನ್ನದ ಪದಕವನ್ನು (Gold Medal) ಗೆದ್ದು ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಹಾಗೂ ತವರೂರು ರಿಪ್ಪನ್‌ಪೇಟೆಯ (Ripponpet) ಕೀರ್ತಿ ಪತಾಕೆಯನ್ನು ವಿದ್ಯಾರ್ಥಿ ಪ್ರಜ್ವಲ್ ಎಸ್ ಹಾರಿಸಿದ್ದಾರೆ.

ಈತ ಖೇಲೋ ಇಂಡಿಯಾ ಕಬ್ಬಡಿ ಪಂದ್ಯಾವಳಿಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದ್ದು, ಆ ವಿಶ್ವವಿದ್ಯಾನಿಲಯಕ್ಕೆ 33 ವರ್ಷಗಳ ನಂತರ ಚಿನ್ನದ ಪದಕವನ್ನು ತಂದು ಕೊಟ್ಟಿದ್ದಾರೆ.


ಪ್ರಜ್ವಲ್ ಕ್ರೀಡೆಯಲ್ಲಿ ತೋರಿಸಿರುವ ಅಪ್ರತಿಮ ಸಾಧನೆಯಿಂದ ಖೇಲೋ ಆಲ್ ಇಂಡಿಯಾ ಯೂತ್ ಗೇಮ್ಸ್ ಗೆ ಆಯ್ಕೆಯಾಗಿದ್ದು, ಅಲ್ಲಿಯೂ ಸಹ ಇನ್ನು ಹೆಚ್ಚಿನ ಸಾಧನೆ ಮಾಡಲಿ ಎಂದು ರಿಪ್ಪನ್‌ಪೇಟೆಯ ಕ್ರೀಡಾಭಿಮಾನಿಗಳು ವಿವಿಧ ಸಂಘ-ಸಂಸ್ಥೆಗಳು ಹೊಸನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಶುಭ ಹಾರೈಸಿದ್ದಾರೆ.
ಪ್ರಜ್ವಲ್ ರಿಪ್ಪನ್‌ಪೇಟೆಯ ಶ್ರೀಧರ್ ಹಾಗೂ ಶುಭ ಶ್ರೀಧರ್ ದಂಪತಿಗಳ ಪುತ್ರ.

Leave A Reply

Your email address will not be published.

error: Content is protected !!