ಹೊಸನಗರ ಬಗರ್ ಹುಕುಂ ಸಮಿತಿಗೆ ನೇಮಕ
ಹೊಸನಗರ: ತಾಲೂಕಿನ ಬಗರ್ ಹುಕಂ ಸಮಿತಿಗೆ ನೂತನ ಸದಸ್ಯರಾಗಿ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯೆ ಜ್ಯೋತಿ ಚಂದ್ರಮೌಳಿ, ಹರತಾಳು ಗ್ರಾಮ ಪಂಚಾಯತಿ ಸದಸ್ಯೆ ಸಾಕಮ್ಮ ಹಾಗೂ ಸ್ವಾಮಿ ಜೆರಾಕ್ಸ್ ಮಾಲೀಕ ಎನ್.ಇ.ಸ್ವಾಮಿ ಅವರನ್ನು ನೇಮಕ ಮಾಡಿದ್ದು, ರಾಜ್ಯ ಸರ್ಕಾರ ಆದೇಶ ಪ್ರತಿಗೆ ರಾಜ್ಯಪಾಲರ ಅಂಕಿತ ದೊರೆತಿದೆ.
ಸಮಿತಿಗೆ ನೇಮಕ ಮಾಡಲು ಸಹಕರಿಸಿದ ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ನೂತನ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.