Rain | Hosanagara ; ತಾಲೂಕಿನಾದ್ಯಂತ ಅಬ್ಬರದ ಮಳೆ, ಅನ್ನದಾತ ನಿಟ್ಟುಸಿರು

0 420

ಹೊಸನಗರ : ಮಳೆ(ಲೆ)ನಾಡಿನ ತವರೂರು ಲಿಂಗನಮಕ್ಕಿ ಜಲಾಶಯಕ್ಕೆ ನೀರುಣಿಸುವ ಪ್ರಧಾನ ಜಲಾನಯನ ಪ್ರದೇಶವಾದ ಹೊಸನಗರ ತಾಲೂಕಿನಾದ್ಯಂತ ಶುಕ್ರವಾರ ಹಸ್ತ ಮಳೆ ತನ್ನ ಪ್ರಭಾವ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಮಳೆ ಇಲ್ಲದೆ ಕಂಗೆಟ್ಚಿದ್ದ ಅನ್ನದಾತ ನೆಮ್ಮದಿಯ ಉಸಿರು ಬಿಡುವಂತಾಗಿದೆ.

ಇಂದು ಬೆಳಿಗ್ಗೆ 8:00ಗೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ತಾಲೂಕಿನ ಹುಲಿಕಲ್ಲಿನಲ್ಲಿ 51 ಮಿ.ಮಿ., ಸಾವೇಹಕ್ಲುವಿನಲ್ಲಿ 50, ಚಕ್ರಾನಗರದಲ್ಲಿ 49, ಮಾಸ್ತಿಕಟ್ಟೆಯಲ್ಲಿ 41, ಮಾಣಿಯಲ್ಲಿ 31 ಮತ್ತು ಯಡೂರಿನಲ್ಲಿ 21 ಮಿಲಿ ಮೀಟರ್ ಮಳೆ ದಾಖಲಾಗಿದೆ.

ಇನ್ನೂ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ 1787.25 ಅಡಿ ತಲುಪಿದ್ದು ಜಲಾಶಯಕ್ಕೆ 4807 ಕ್ಯೂಸೆಕ್ ನೀರು ಹರಿದು ಬರುತ್ತಿದೆ.

Leave A Reply

Your email address will not be published.

error: Content is protected !!