Shivamogga | ಜನಗಣಮನ ಬೆಸೆಯೋಣ ಬೈಕ್ ಯಾತ್ರೆ
ಶಿವಮೊಗ್ಗ: ನಮೋ ಬ್ರಿಗೇಡ್ 2.0 ಆಶ್ರಯದಲ್ಲಿ ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬರಲು ದೇಶದ ಎಲ್ಲಾ ಜನಾಂಗದ ವಿಶ್ವಾಸ ಗಳಿಸಲು ಜನಗಣಮನ ಬೆಸೆಯೋಣ ಬೈಕ್ ಯಾತ್ರೆ ನಿನ್ನೆ ಚಕ್ರವರ್ತಿ ಸೂಲಿಬೆಲೆ ಅವರ ನೇತೃತ್ವದಲ್ಲಿ ಜೆಎನ್ಎನ್ಸಿ ಕಾಲೇಜು ಮುಂಭಾಗದಿಂದ ಉಷಾ ನರ್ಸಿಂಗ್ ಹೋಂ. ವಿನೋಬನಗರ ಪೊಲೀಸ್ ಚೌಕಿ, ಕುವೆಂಪು ರಸ್ತೆ, ಸೀನಪ್ಪ ಶೆಟ್ಟಿ ವೃತ್ತ, ನೆಹರೂ ರಸ್ತೆ, ಶಿವಪ್ಪನಾಯಕ ವೃತ್ತ, ಗಾಂಧಿಬಜಾರ್, ಸಿದ್ದಯ್ಯ ಸರ್ಕಲ್ ಮೂಲಕ ಕೆ.ಆರ್. ಪುರಂ ರಸ್ತೆಯ ಅಂಜನಾ ಪಟೇಲ್ ಸಮುದಾಯ ಭವನದವರೆಗೆ ನಡೆಯಿತು.
ಅಲ್ಲಿ ವಿಷ್ಣು ಪಟೇಲ್ ಸಮಾಜದ ಆತಿಥ್ಯ ಸ್ವೀಕರಿಸಿ ಚಕ್ರವರ್ತಿ ಸೂಲಿಬೆಲೆಯವರು ದೇಶದ ಪ್ರಸ್ತುತ ಪರಿಸ್ಥಿತಿ ಮತ್ತು ಅನಿವಾರ್ಯತೆ ಬಗ್ಗೆ ಮಾತನಾಡಿದರು.
ಈ ಸಂದರ್ಭದಲ್ಲಿ ನಮೋ ಬ್ರಿಗೇಡ್ನ ರಾಜೇಶ್ ಶೆಣೈ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.