ತಾಲ್ಲೂಕು ಮಟ್ಟದ ಸೈಕಲ್ ಸ್ಪರ್ಧೆಯಲ್ಲಿ ಭಾಗವಹಿಸಿದ 70ರ ವಯೋವೃದ್ದರು

0 1,059

ರಿಪ್ಪನ್‌ಪೇಟೆ: ಯುವ ಜನಾಂಗವನ್ನು ನಾಚಿಸುವಂತೆ ಮೂವರು ಯುವಕರೊಂದಿಗೆ ನಾವುಗಳೇನು ಯಾವುದರಲ್ಲಿಯೂ ಕಮ್ಮಿಯಿಲ್ಲ ಎಂಬಂತೆ 60-70 ವರ್ಷದ ಟಿ.ಆರ್.ಕೃಷ್ಣಪ್ಪ ಮತ್ತು ಹಾಲುಗುಡ್ಡೆಯ ತಮ್ಮಯ್ಯ ಇಬ್ಬರು ಸೈಕಲ್ ಸ್ಫರ್ಧೆಯಲ್ಲಿ ಭಾಗವಹಿಸಿದ್ದರು.

ಇಲ್ಲಿನ ಕಲಾಕೌಸ್ತುಭ ಕನ್ನಡ ಸಂಘದವರು ಆಯೋಜಿಸಲಾದ “ಕನ್ನಡ ರಾಜ್ಯೋತ್ಸವ’’ ಕಾರ್ಯಕ್ರಮದಲ್ಲಿ ಏರ್ಪಡಿಸಲಾದ ತಾಲ್ಲೂಕ್ ಮಟ್ಟದ ಸೈಕಲ್ ಸ್ಪರ್ಧೆಗೆ ಕಲಾಕೌಸ್ತುಭ ಕನ್ನಡ ಸಂಘದ ಅಧ್ಯಕ್ಷೆ ಲೀಲಾ ಉಮಾಶಂಕರ್ ಕನ್ನಡ ಧ್ವಜವನ್ನು ಹಿಡಿಯುವ ಮೂಲಕ ಚಾಲನೆ ನೀಡಿ ಸ್ಪರ್ಧೆಯಲ್ಲಿ ಬಹುಮಾನ ಮುಖ್ಯವಾಗದೇ ಭಾಗವಹಿಸುವಂತೆ ಪ್ರೋತ್ಸಾಹಿಸುವುದು ಮುಖ್ಯ. ಹಾಗೆಯೇ ವಯಸ್ಸಾಯಿತು ಎಂದು ಹೇಳಿ ಹಿಂದೆ ಉಳಿಯದೇ ಯುವಕರನ್ನು ಮೀರಿಸುವಂತೆ ಇಂದಿನ ಸ್ಪರ್ಧೆಯಲ್ಲಿ ವಯೋವೃದ್ಧರು ಭಾಗವಹಿಸಿ ದ್ವಿತೀಯ ಸ್ಥಾನವನ್ನು ಗಿಟ್ಟಿಸುವಲ್ಲಿ ಹಾಲುಗುಡ್ಡೆ ತಮ್ಮಯ್ಯ ಯಶಸ್ವಿಯಾಗಿದ್ದಾರೆಂದು ಸಾರ್ವಜನಿಕರು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಕಲಾಕೌಸ್ತುಭ ಕನ್ನಡ ಸಂಘದ ಪ್ರಧಾನ ಕಾರ್ಯದರ್ಶಿ ಶೈಲಾ ಆರ್.ಪ್ರಭು, ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷೆ ನಾಗರತ್ನದೇವರಾಜ್, ಎಂ.ಸುರೇಶ್‌ಸಿಂಗ್, ಪದ್ಮಾ ಸುರೇಶ್, ಅಶ್ವಿನಿ ರವಿಶಂಕರ್, ಉಮಾಸುರೇಶ್, ಮುರುಳಿ ಕೆರೆಹಳ್ಳಿ, ಹಿರಿಯಣ್ಣ ಭಂಡಾರಿ, ಗೀತಾ, ವೇದಾ, ರೇಖಾರವಿ, ಲಕ್ಷ್ಮಿ ಶ್ರೀನಿವಾಸ್‌ ಆಚಾರ್, ರಾಮು ಬಳೆಗಾರ್, ಅರುಣ್‌ ಕಾಳಮುಖಿ ಇನ್ನಿತರರು, ಸಂಘದ ಪದಾಧಿಕಾರಿಗಳು ಹಾಜರಿದ್ದರು.

Leave A Reply

Your email address will not be published.

error: Content is protected !!