ಬಟ್ಟೆಮಲ್ಲಪ್ಪದ ಶ್ರೀ ವ್ಯಾಸ ಮಹರ್ಷಿ ಗುರುಕುಲದಲ್ಲಿ ಏ.09 ಮತ್ತು 10 ರಂದು ಚತುರ್ದಶ ಸಂವತ್ಸರ ಪ್ರದರ್ಶಿನಿ ಸಂಭ್ರಮ – 2024
ಹೊಸನಗರ : ಏಪ್ರಿಲ್ 9 ಮತ್ತು 10 ರಂದು ಬಟ್ಟೆಮಲ್ಲಪ್ಪದ ಗುರುಕುಲದ ಚತುರ್ದಶ ಸಂವತ್ಸರ ಪ್ರದರ್ಶಿನಿ ಸಂಭ್ರಮ -2024 ನ್ನು ಹಮ್ಮಿಕೊಳ್ಳಲಾಗಿದೆ.
ಮೊದಲ ದಿನ ಪ್ರತಿಭಾ ಪುರಸ್ಕಾರ ಹಾಗೂ ಪ್ರತಿಷ್ಠಿತ ವೇದ ವ್ಯಾಸ ಗುರು ಪುರಸ್ಕಾರ ಪ್ರಧಾನ ಹಾಗೂ ಗುರುಕುಲ ಸಾಮಾಜಿಕ ಸೇವಾ ಸಮ್ಮಾನ ಪ್ರದಾನ ನಡೆಯಲಿದೆ. ಹಾಗೂ ವಿಶೇಷವಾಗಿ ಅಯೋಧ್ಯ ಶ್ರೀ ರಾಮ ಪ್ರತಿಷ್ಟಾಪನೆ ಅಂಗವಾಗಿ ವಿಶೇಷ ಶ್ರೀರಾಮ ವೈಭವ ಕಾರ್ಯಕ್ರಮ ನಡೆಯಲಿದೆ.
ವಿದುಷಿ ಶ್ರೀರಂಜನಿ, ಶ್ವೇತಾ ವಿಷ್ಣು ಜೋಯ್ಸ್, ಪ್ರಶಾಂತ್ ಮಧ್ಯಸ್ತ, ಸಂವತ್ಸರ, ಶ್ರೀಧರ್ ಶಾನುಬೋಗ್ ಇವರುಗಳ ನೇತೃತ್ವದಲ್ಲಿ ಹಾಡು, ನೃತ್ಯ, ರೂಪಕಗಳ ವಿಶೇಷ ಕೊಲಾಜ್ ಮಾದರಿಯಲ್ಲಿ ಸಿದ್ದಗೊಂಡಿದೆ.
ಎರಡನೇ ದಿನ ಸಾಮಾಜಿಕ ಹೋರಾಟಗಾರ, ರಂಗ ಕರ್ಮಿ, ಸಿನಿ ನಟ ಹಾಗೂ ಗುರುಕುಲದ ಹಿತೈಷಿ ಯೇಸು ಪ್ರಕಾಶ್ ಅವರ ನುಡಿ ನಮನ ಹಾಗೂ ಸಮಾರೋಪ ಮತ್ತು ಗುರುಕುಲದ ಯಕ್ಷ ಕುಟೀರದ ಮಕ್ಕಳಿಂದ ಯಕ್ಷ ಗುರು ಎ. ಆರ್. ಗಣಪತಿ, ಪುರೆಪ್ಪೆಮನೆ ಇವರ ನಿರ್ದೇಶನದಲ್ಲಿ ಲವ ಕುಶ ಯಕ್ಷಗಾನ ಪ್ರದರ್ಶನ ಗೊಳ್ಳಲಿದೆ. ಅಲ್ಲದೇ ಗುರುಕುಲದ ಹಿರಿಯ ಕಿರಿಯ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಗುವುದು.
ಈ ಎಲ್ಲಾ ಕಾರ್ಯಕ್ರಮಗಳಲ್ಲಿ ತಾವು ಭಾಗವಹಿಸಿ ಯಶಸ್ವಿಗೊಳಿಸಿ ಕೊಡುವಂತೆ ಮಂಜುನಾಥ್ ಎಸ್. ಬ್ಯಾಣದ ಹಾಗೂ ಗುರುಕುಲ ಕುಟುಂಬದವರು ಕೇಳಿಕೊಂಡಿದ್ದಾರೆ.