Shivamogga | ‘ಜೇನು ಸಾಕಾಣೆ’ ಕಾರ್ಯಕ್ರಮದಡಿ ಅರ್ಜಿ ಆಹ್ವಾನ

0 670


ಶಿವಮೊಗ್ಗ : ಶಿವಮೊಗ್ಗ ಜಿಲ್ಲೆ ತೋಟಗಾರಿಕೆ ಇಲಾಖೆ ವತಿಯಿಂದ 2023-24ನೇ ಸಾಲಿನ ಜಿಲ್ಲಾ ವಲಯದ ಜೇನು ಸಾಕಾಣೆ ಕಾರ್ಯಕ್ರಮದಡಿ ಜೇನುಕೃಷಿ ತರಬೇತಿ/ಜೇನುಪಟ್ಟಿಗೆ, ಕುಟುಂಬ ಮತ್ತು ಸ್ಟ್ಯಾಂಡ್‍ಗಳಿಗೆ ಸಹಾಯಧನ ನೀಡಲು ಸರ್ಕಾರದ ಸುತ್ತೋಲೆಯನುಸಾರ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.


ಆಸಕ್ತ ರೈತರು/ಸಾರ್ವಜನಿಕರು ಈ ಕೆಳಕಂಡ ಶಿವಮೊಗ್ಗ ಜಿಲ್ಲೆಯ ಎನ್‍ಐಸಿ ವೆಬ್‍ಸೈಟ್ ಬಳಸಿ, ಅಗತ್ಯ ದಾಖಲಾತಿಗಳೊಂದಿಗೆ ಅ.10 ರೊಳಗೆ ಆನ್‍ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿರುತ್ತದೆ ಅಥವಾ ನೇರವಾಗಿ ತಮ್ಮ ತಾಲ್ಲೂಕು ತೋಟಗಾರಿಕೆ ಇಲಾಖೆ ಕಚೇರಿಯನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ.


ಹೆಚ್ಚಿನ ಮಾಹಿತಿಗಾಗಿ

  • ಶಿವಮೊಗ್ಗ : 08182-279415/9900046087
  • ಭದ್ರಾವತಿ : 08282-295029/9448238921
  • ಶಿಕಾರಿಪುರ : 08187-223544/9663634388
  • ಸೊರಬ : 08184-295112/9902170900
  • ಸಾಗರ : 08183-295124/7892782514
  • ಹೊಸನಗರ : 08185-295364/9591695327
  • ತೀರ್ಥಹಳ್ಳಿ : 08181-228151/6360923705

ಮತ್ತು ತಾಲ್ಲೂಕು ತೋಟಗಾರಿಕೆ ಇಲಾಖಾ ಕಚೇರಿ ಅಥವಾ ಅಧಿಕಾರಿಗಳನ್ನು ಸಂಪರ್ಕಿಸಬಹುದೆಂದು ಶಿವಮೊಗ್ಗ ಜಿಲ್ಲಾ ಪಂಚಾಯತ್ ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave A Reply

Your email address will not be published.

error: Content is protected !!