ದೇವರ ದರ್ಶನಕ್ಕೆ ಹೊರಟಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಕಾರು, ಮಹಿಳೆ ಸಾವು !

Written by Mahesha Hindlemane

Published on:

CHIKKAMAGALURU ; ಹಾಸನಾಂಬೆ ದರ್ಶನಕ್ಕೆ ಹೊರಟಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದು, ಮಹಿಳೆ ಮೃತಪಟ್ಟ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಕಲ್ಕೆರೆ ಗ್ರಾಮದಲ್ಲಿ ಅ.30ರ ಬುಧವಾರ ನಡೆದಿದೆ.

WhatsApp Group Join Now
Telegram Group Join Now
Instagram Group Join Now
ಓದುಗರಿಗೆ ಹಾಗೂ ಜಾಹೀರಾತುದಾರರಿಗೆ ನರಕ ಚತುರ್ದಶಿಯ ಹಾರ್ದಿಕ ಶುಭಾಶಯಗಳು

ಚಿಕ್ಕಮಗಳೂರು ತಾಲೂಕಿನ ಗವನಹಳ್ಳಿ ಗ್ರಾಮದ ಮಂಜು-ವನಿತಾ ದಂಪತಿ ಪ್ರಯಾಣಿಸುತ್ತಿದ್ದ ಕಾರು ಬುಧವಾರ ಬೆಳಗಿನಜಾವ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.

ಮಂಜು ಪತ್ನಿ ವನಿತಾ (38) ಮೃತಪಟ್ಟವರು. ಕಾರು ಚಲಾಯಿಸುತ್ತಿದ್ದ ಮಂಜು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಾರು ಕೆರೆಗೆ ಬಿದ್ದ ಕೂಡಲೇ ಸ್ಥಳಿಯರಿಂದ ರಕ್ಷಣಾ ಕಾರ್ಯ ನಡೆದಿದ್ದು, ಕಾರಿಗೆ ಹಗ್ಗ ಕಟ್ಟಿ ಕಲ್ಕೆರೆ ಗ್ರಾಮಸ್ಥರು ಎಳೆದು ರಕ್ಷಣಾ ಕಾರ್ಯಾಚರಣೆ ಮಾಡಿದ್ದರು. ಕಾರು ಕೆರೆಗೆ ಬಿದ್ದು, ವನಿತಾ ನೀರು ಕುಡಿದಿದ್ದರಿಂದ ಆಕೆಯನ್ನು ಬದುಕಿಸುವ ಗ್ರಾಮಸ್ಥರ ಹರಸಾಹಸ ಫಲ ನೀಡಲಿಲ್ಲ.

ಬೇಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

Leave a Comment