ಹೊಸನಗರ : ಲೋಕ್ ಅದಾಲತ್‌ನಲ್ಲಿ 613 ಪ್ರಕರಣ ಇತ್ಯರ್ಥ, ₹ 1 ಕೋಟಿಗಳಿಗೂ ಅಧಿಕ ದಂಡದ ಹಣ ಸಂದಾಯ

0 38

ಹೊಸನಗರ: ರಾಜ್ಯದಲ್ಲಿ ಲೋಕ್ ಅದಾಲತ್ ಕಾರ್ಯಕ್ರಮಗಳು ನ್ಯಾಯಾಲಯದಲ್ಲಿ ನಡೆಸುತ್ತಿರುವುದರಿಂದ ಸಾರ್ವಜನಿಕರ ಅಮೂಲ್ಯ ಸಮಯದ ಜೊತೆಗೆ ನ್ಯಾಯಾಲಯದ ಸಮಯ ವ್ಯರ್ಥವಾಗುವುದಿಲ್ಲ ದಾವೆದಾರರ ಸಂಬಂಧಗಳೂ ಗಟ್ಟಿಯಾಗಿ ಉಳಿಯಲು ಸಹಕಾರಿಯಾಗುತ್ತದೆ ಎಂದು ಹೊಸನಗರದ ನ್ಯಾಯಾಲಯದ ನ್ಯಾಯಾಧೀಶ ರವಿಕುಮಾರ್ ಕೆಯವರು ಹೇಳಿದರು.

ಇಲ್ಲಿನ ನ್ಯಾಯಾಲಯದ ಆವರಣದಲ್ಲಿ ಶನಿವಾರ ರಾಷ್ಟ್ರಿಯ ಲೋಕ್ ಅದಾಲತ್ ಕಾರ್ಯಕ್ರಮ ನಡೆದಿದ್ದು ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,‌ ಸಿವಿಲ್ ಕೇಸ್ ಕ್ರಿಮಿನಲ್ ಕೇಸ್ಗಳು ನಡೆಯುವುದು ಸಹಜ ಆದರೆ ಆ ಕೇಸ್ಗಳನ್ನು ತಿಂಗಳು ವರ್ಷಗಳವರೆಗೆ ಎಳೆಯುವುದಕ್ಕಿಂತ ಎದುರುದಾರರು ಮತ್ತು ದೂರು ನೀಡಿದವರು ರಾಜೀ ಮಾಡಿಕೊಂಡು ನೆಮ್ಮದ್ಧಿಯಿಂದ ಬದುಕುವುದು ದೊಡ್ಡಗುಣ. ರಾಜಿ ಸಂಧಾನಕ್ಕಾಗಿಯೇ ನ್ಯಾಯಾಲಯಗಳಲ್ಲಿ ಲೋಕ್ ಅದಾಲತ್ ಜಾರಿ ಮಾಡಲಾಗಿದ್ದು ಈ ಸಂದರ್ಭದಲ್ಲಿ ರಾಜಿ ಮಾಡಲು ಸಾಧ್ಯವಾಗುವಂತಹ ಪ್ರಕರಣಗಳನ್ನು ಎದುರುದಾರ ಮತ್ತು ದೂರುದಾರರ ಸಮ್ಮುಖದಲ್ಲಿ ನ್ಯಾಯಬದ್ಧವಾದ ತೀರ್ಮಾನಗಳನ್ನು ಮಾಡಿ ರಾಜಿ ಮಾಡಲಾಗುವುದು ನ್ಯಾಯಾಲಯದಲ್ಲಿರುವ ಹೆಚ್ಚಿನ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಬಗೆ ಹರಿಸಿಕೊಳ್ಳುವುದು ಸೂಕ್ತ ಎಂದರು.

613 ಪ್ರಕರಣ ಇತ್ಯರ್ಥ :
ಹೊಸನಗರದ ಪ್ರಧಾನ ವ್ಯವಹಾರ ನ್ಯಾಯಾಲಯದ ಆವರಣದಲ್ಲಿ 672 ಪ್ರಕರಣದಲ್ಲಿ 613 ಪ್ರಕರಣಗಳು ಇತ್ಯರ್ಥವಾಗಿದ್ದು ಸುಮಾರು 1,05,88,805 ಹಣವನ್ನು ದಂಡದ ರೂಪದಲ್ಲಿ ಹಣ ಸಂದಾಯವಾಗಿದೆ.
ಹೊಸನಗರ ಪ್ರಧಾನ ನ್ಯಾಯಲಯದಲ್ಲಿ ಒಟ್ಟು 1421 ಪ್ರಕರಣಗಳಿದ್ದು ಅದರಲ್ಲಿ ಲೋಕ್ ಅದಾಲತ್ ನ್ಯಾಯಾಲಯಕ್ಕೆ 672 ಪ್ರಕರಣಗಳು ಇತಥ್ಯಕ್ಕೆ ಬಂದಿದ್ದು ಹೊಸನಗರ ನ್ಯಾಯಾಲಯದ ನ್ಯಾಯಾಧೀಶರಾದ ರವಿಕುಮಾರ್ ಕೆ.ಯವರು 613 ಪ್ರಕರಣಗಳನ್ನು ಇತ್ಯರ್ಥ ಪಡಿಸಿದ್ದಾರೆ.
ಲೋಕ್ ಅದಾಲತ್‌ನಲ್ಲಿ ಹೆಚ್ಚಾಗಿ ಚೆಕ್ ಕೇಸ್ಗಳು ಹಾಗೂ ಮೊಟಾರ್ ವಾಹನದ ದಂಡದ ಕೇಸುಗಳು ಬ್ಯಾಂಕ್‌ಗೆ ಸಾಲದ ಹಣದ ಕೇಸುಗಳು ಹೆಚ್ಚಾಗಿ ಇತ್ಯರ್ಥ ಪಡಿಸಲಾಗಿದೆ.

ಕುಟುಂಬಗಳು ಒಂದಾಗಿದೆ:
ಹೊಸನಗರ ಪ್ರದಾನ ವ್ಯವಹಾರ ನ್ಯಾಯಾಲಯದಲ್ಲಿ ಆಸ್ತಿ ವಿಚಾರದಲ್ಲಿ ಒಂದೇ ಕುಟುಂಬದ ಮೂರು ಕೇಸ್ಗಳು ಇತ್ಯರ್ಥಕ್ಕೆ ಬಂದಿದ್ದು ಅದರಲ್ಲಿ ಒಂದೇ ಕುಟುಂಬದ 6 ಜನರು ಆಸ್ತಿ ಪಾಲಿಗಾಗಿ ಸರ್ವೆನಂಬರ್ 17, 15, 28 ಹೊಸನಗರ ತಾಲ್ಲೂಕು ಕೆರೆಹಳ್ಳಿ ಗ್ರಾಮದವರು ನ್ಯಾಯಾಲಯಕ್ಕೆ ದಾವೆ ಸಲ್ಲಿಸಿದ್ದು ಇದನ್ನು ಲೋಕ್ ಅದಾಲತ್ ನ್ಯಾಯಾಲಯದಲ್ಲಿ ಇತ್ಯರ್ಥ ಪಡಿಸಿಕೊಂಡಿದ್ದಾರೆ.

14 ಕೇಸ್ಗಳು ಇತ್ಯರ್ಥ:
ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶೆ ನಸೀರಾಬಾನುರವರ ನ್ಯಾಯಾಲಯದಲ್ಲಿ ಒಟ್ಟು 368 ಕೇಸ್ಗಳಿದ್ದು ಅದರಲ್ಲಿ 66 ಕೇಸ್ಗಳು ಲೋಕ್ ಅದಾಲತ್‌ಗೆ ಬಂದಿದ್ದು 14 ಕೇಸ್ಗಳನ್ನು ಇತ್ಯರ್ಥ ಪಡಿಸಿ 5,22,509 ರೂಪಾಯಿಗಳನ್ನು ಪಾವತಿಸಿಕೊಂಡು ಮಾತನಾಡಿ, ಹೆಚ್ಚಿನ ಸಂಖ್ಯೆಯಲ್ಲಿ ಜನರು ಈ ಲೋಕ್ ಅದಾಲತ್ ಸದಾವಕಾಶವನ್ನು ಉಪಯೋಗಿಸಿಕೊಳ್ಳಬೇಕು. ಸರ್ಕಾರಿ ಅಭಿಯೋಜಕರುಗಳಿಗೆ ಪೊಲೀಸ್ ಇಲಾಖೆಗೆ ಇನ್ಶುರೆನ್ಸ್ ಕಂಪನಿಗಳಿಗೆ ಸಂಧಾನಕಾರರು, ವಕೀಲರುಗಳು, ಬ್ಯಾಂಕ್ ಅಧಿಕಾರಿಗಳು, ಅರಣ್ಯ ಇಲಾಖೆ, ಅಬಕಾರಿ ಇಲಾಖೆ, ನ್ಯಾಯಾಲಯದ ಸಿಬ್ಬಂದಿಗಳು ಲೋಕ ಅದಾಲತ್ ಯಶಸ್ವಿಯಾಗಲೂ ಕಾರಣರಾದ ಎಲ್ಲರನ್ನು ಅಭಿನಂದಸಿದರು.

ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ವಾಲೆಮನೆ ಶಿವಕುಮಾರ್, ಹಿರಿಯಪ್ಪ, ಷಣ್ಮುಖಪ್ಪ, ಚಂದರಪ್ಪ, ಕೆ.ಎಸ್. ವಿನಾಯಕ, ವೈ.ಪಿ ಮಹೇಶ್, ಗುರುಕಿರಣ್, ಬಸವರಾಜ್ ಮಂಡಾಣಿ ಗುರುರಾಜ್, ಅಮೃತ ದೂನ, ಸವಿತಾ, ಶರಣಪ್ಪ, ಗುರುಮೂರ್ತಿ, ಉಮೇಶ್, ವಿನೋದ, ಗೀತಾ, ರೇಖಾ, ಪ್ರೀತಿ, ಸುನೀಲ್, ಗುರುರಾಜ್, ಈರಪ್ಪ, ಲೋಕೇಶ್ ಲೋಕಪ್ಪ ನ್ಯಾಯಾಲಯದ ಎಲ್ಲಾ ನ್ಯಾಯಾವಾದಿಗಳು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!