ರಿಪ್ಪನ್ಪೇಟೆ: ಇಲ್ಲಿಗೆ ಸಮೀಪದ ಕೋಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಳಿದ ಎರಡು ವರ್ಷದ ಅವಧಿಗೆ ವೇದಾಂತಪ್ಪಗೌಡ ಆಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ತಾಲ್ಲೂಕ್ ಪಂಚಾಯ್ತಿ ಮಾಜಿ ಸದಸ್ಯ ಬಿ.ಜಿ.ಚಂದ್ರಮೌಳಿಗೌಡರ, ಗ್ರಾ.ಪಂ.ಮಾಜಿ ಅಧ್ಯಕ್ಷ ಕೆ.ವೈ.ಜಯಂತ್, ಸುಧಾಕರ, ಸದಸ್ಯರಾದ ಕಲಗೋಡು ಉಮೇಶ್,ಸುಧಾಕರ, ಯಳಗಲ್ಲು ರಾಜು, ಪಿಸಿಎಸಿ ಉಪಾಧ್ಯಕ್ಷ ಸುಬ್ಬಣ್ಣ, ನಿರ್ದೇಶಕರಾದ ಕುಮಾರಸ್ವಾಮಿ, ಎಂ. ವೀರೇಂದ್ರ, ಗೌರಮ್ಮ, ಗಂಗಮ್ಮ, ಹರೀಶ, ಪರಮೇಶ್, ಇನ್ನಿತರರು ಪಾಲ್ಗೊಂಡಿದ್ದರು.