ಬಿದರಹಳ್ಳಿಯಲ್ಲಿ ಕುಮಧ್ವತಿ ನದಿ ನೀರಿಗೆ ವಿಷ ಬೆರೆಸಿದ ಕಿಡಿಗೇಡಿಗಳು ; ಜಲಚರಗಳ ಮಾರಣಹೋಮ ! Hosanagara | Ripponpete | Shivamogga | Fish
ರಿಪ್ಪನ್ಪೇಟೆ: ಸಮೀಪದ ಅಮೃತ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಿದರಹಳ್ಳಿ ಕುಮಧ್ವತಿ ನದಿಯಲ್ಲಿ ಕಿಡಿಗೇಡಿಗಳು ವಿಷ ಬೆರೆಸಿ ಮೀನು ಸೇರಿದಂತೆ ಪ್ರಾಣಿ ಪ್ರಭೇದಗಳ ಮಾರಾಣಹೋಮ ನಡೆಸಿರುವ ಘಟನೆ ನಡೆದಿದೆ.
ಕುಮಧ್ವತಿ ನದಿ ನೀರಿಗೆ ಮೈಲುತುತ್ತ ವಿಷ ಬೆರೆಸಿದ ಕಾರಣ ನದಿಯಲ್ಲಿನ ಮೀನುಗಳು ಹಾಗೂ ಇತರ ಜಲಚರಗಳು ಸತ್ತು ಹೋಗುತ್ತಿದ್ದು ಇನ್ನೂ ಬೇಸಿಗೆ ಕಾಲವಾಗಿರುವ ಕಾರಣ ಕಾಡು ಪ್ರಾಣಿಗಳು ಕುಡಿಯಲು ನೀರಿಗಾಗಿ ಪರಿತಪ್ಪಿಸುತ್ತಾ ನದಿಯಲ್ಲಿನ ಹೊಂಡದ ನೀರು ಕುಡಿಯಲು ಬಂದು ವಿಷಯುಕ್ತ ನೀರು ಸೇವಿಸಿ ಲಕ್ಷಾಂತರ ಪ್ರಾಣಿ ಸಂಕುಲಗಳ ಮಾರಣಹೋಮಕ್ಕೆ ಕಾರಣವಾಗಿದ್ದಾರೆ.
ವಿಷ ಬೆರೆಸಿದ್ದರಿಂದ ಮೀನು ಕಪ್ಪೆ ಹಾಗೂ ಇನ್ನಿತರ ಜೀವಿಗಳು ನದಿಯ ದಂಡೆಯ ಮೇಲೆ ಸತ್ತು ಬಿದ್ದಿದ್ದು ಇದನ್ನು ತಿನ್ನುವ ಹಕ್ಕಿ ಪಕ್ಷಿಗಳು ಸಹ ಸಾಯುವ ಸಾಧ್ಯತೆ ಇರುತ್ತದೆ ಇನ್ನೂ ಜಾನುವಾರುಗಳು ಕುಡಿಯಲು ಇದೇ ನೀರು ಬಳಸುವುದರಿಂದ ಅವುಗಳ ಜೀವಕ್ಕೂ ಕಂಠಕವಾಗಿದೆ.