ರಿಪ್ಪನ್‌ಪೇಟೆ : ಶ್ರದ್ದಾಭಕ್ತಿಯಿಂದ ತ್ಯಾಗ ಬಲಿದಾನ ಸಾರುವ ಬಕ್ರೀದ್ ಹಬ್ಬದ ಆಚರಣೆ, ಮಳೆಗಾಗಿ ವಿಶೇಷ ಪ್ರಾರ್ಥನೆ

0 70

ರಿಪ್ಪನ್‌ಪೇಟೆ: ಇಲ್ಲಿನ ಹೊಸನಗರ ರಸ್ತೆಯ ಮೊಹಿಯುದ್ದೀನ್ ಜುಮ್ಮಾ ಮಸೀದಿ ಮೆಕ್ಕಾ ಮಸೀದಿ ಹಾಗೂ ಗಾಳಿಬೈಲು ಜುಮ್ಮಾ ಮಸೀದಿ ಮುಸ್ಲಿಂ ಬಾಂಧವರು ಶ್ರದ್ದಾ ಭಕ್ತಿಯೊಂದಿಗೆ ಬಕ್ರೀದ್ ಹಬ್ಬವನ್ನು ಆಚರಿಸಿದರು.

ಮೊಹಿಯುದ್ದೀನ್ ಜುಮ್ಮಾ ಮಸೀದಿ ಮೆಕ್ಕಾ ಮಸೀದಿಯಲ್ಲಿ ಮುಸ್ಲಿಂ ಬಾಂಧವರು ಬಕ್ರೀದ್ ಹಬ್ಬದ ಅಂಗವಾಗಿ ಮತ್ತು ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದರು ನಂತರ ಧರ್ಮಗುರು ಮುನೀರ್ ಸಖಾಫಿ ಮಾತನಾಡಿ, ಪ್ರತಿಯೊಂದು ಧರ್ಮವನ್ನು ಗೌರವಿಸುವ ಮೂಲಕ ಸಹೋದರತ್ವದಿಂದ ಬಾಳ್ವೆ ನಡೆಸಬೇಕು. ತ್ಯಾಗ ಬಲಿದಾನದ ಪ್ರತೀಕವಾದ ಬಕ್ರೀದ್ ಹಬ್ಬವನ್ನು ಶ್ರದ್ದಾಭಕ್ತಿಯಿಂದ ಆಚರಿಸುವುದು ಮುಖ್ಯವಾಗಿದೆ. ಯಾವುದೇ ಧರ್ಮವನ್ನು ಅವಹೇಳನ ಮಾಡುವುದನ್ನು ಇಸ್ಲಾಂ ಧರ್ಮ ಖಂಡಿಸುತ್ತದೆ ಎಂದರು.

ಮಳೆಯ ಹಿನ್ನೆಲೆಯಲ್ಲಿ ಮೆರವಣಿಗೆಯನ್ನು ರದ್ದುಗೊಳಿಸಿ ಮುಸ್ಲಿಂ ಬಾಂಧವರು ಗುಂಪು ಗುಂಪಾಗಿ ಸಾಗರ ರಸ್ತೆಯಲ್ಲಿರುವ ಈದ್ಗಾ ಮೈದಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭಾಶಯಗಳನ್ನು ವಿನಮಯ ಮಾಡಿಕೊಂಡರು.
ಗಾಳಿಬೈಲು ಗ್ರಾಮದ ಜುಮ್ಮಾ ಮಸೀದಿ ಮುಸ್ಲಿಂ ಬಾಂಧವರು ಗಾಳಿಬೈಲು ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.

ರಿಪ್ಪನ್‌ಪೇಟೆ ಮೊಹಿಯುದ್ದೀನ್ ಜುಮ್ಮಾ ಮಸೀದಿ ಆಧ್ಯಕ್ಷರಾದ ಮಹಮ್ಮದ್ ರಫಿ,ಕಾರ್ಯದರ್ಶಿ ಶಫಿವುಲ್ಲಾ,ಮುಖಂಡರಾದ ಆರ್.ಎ.ಚಾಬುಸಾಬ್, ಅಮ್ಮೀರಹಂಜಾ, ಶಂಶುದ್ದೀನ್, ಕೆ.ಹೆಚ್.ಆರ್.ಮೋಣು, ಫಾಜಿಲ್, ಮುಸ್ತಾಫ್, ಅಬ್ದುಲ್‌ಖುದ್ದೂಸ್, ಹಸನಬ್ಬ, ರೆಹಮಾನ್, ಸದೀಮ್, ನಾಸೀರ್, ಎಂ.ಹೆಚ್. ಮುಸ್ತಾಫ್, ಗಾಳಿಬೈಲು ಜುಮ್ಮಾ ಮಸೀದಿಯ ಧರ್ಮಗುರುಗಳಾದ ಅಖಿಲ್ ಅಹಮ್ಮದ್ ರಝಾ, ಅಧ್ಯಕ್ಷರಾದ ಜಿ.ಕೆ.ಜಾವಿದ್, ಮಹಮ್ಮದ ಷರೀಫ್‌ಸಾಬ್, ಘನಿಸಾಬ್, ವಜೀರ್‌ಸಾಬ್, ಉಬೇದುಲ್ಲಾ ಷರೀಫ್, ಸೈಪುಲ್ಲಾ, ಹಿದಾಯತ್, ಶಬ್ಬೀರ್‌ಸಾಬ್, ಖಲೀಲ್ ಷರೀಫ್ ಇನ್ನಿತರರು ಹಾಜರಿದ್ದರು.

Leave A Reply

Your email address will not be published.

error: Content is protected !!