ಅಡಿಕೆ ಗೊನೆ ಸಾಗಿಸುವಾಗ ಟ್ರ್ಯಾಕ್ಟರ್ ಪಲ್ಟಿ ; ಕಾರ್ಮಿಕ ಸಾವು !
ತೀರ್ಥಹಳ್ಳಿ: ತಾಲೂಕಿನ ಬಾವಿಕೈಸರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲ್ಲಿನಮನೆ ಬಳಿ ಅಡಿಕೆ (Arecanut) ಗೊನೆ ಸಾಗಿಸುವ ವೇಳೆ ಟ್ರ್ಯಾಕ್ಟರ್ (Tractor) ಪಲ್ಟಿಯಾಗಿ ಓರ್ವ ಕಾರ್ಮಿಕ (Labour) ಸಾವನ್ನಪ್ಪಿರುವ ದುರ್ಘಟನೆ ಇಂದು ಜರುಗಿದೆ.
ಇನ್ನೋರ್ವ ಕಾರ್ಮಿಕರಿಗೆ ಗಾಯಗಳಾಗಿದ್ದು ತಾಲೂಕು ಜಯಚಾಮರಾಜೇಂದ್ರ ಆಸ್ಪತ್ರೆಗೆ ದಾಖಲಾಗಿದ್ದು ತೀರ್ಥಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.