ಅದೃಷ್ಟ ಬಹುಮಾನ ಯೋಜನೆ ಫಲಿತಾಂಶ ಪ್ರಕಟ ; ಬೈಕ್ ಪಡೆದ ಶಿಕ್ಷಕಿ
ಹೊಸನಗರ: ಇಲ್ಲಿನ ಮಹೇಶ್ವರ, ಪಾರ್ವತಿ, ಗಣಪತಿ ದೇವಸ್ಥಾನದ ಕಾರ್ತಿಕ ದೀಪೋತ್ಸವದ ಅಂಗವಾಗಿ ನಡೆದ ಅದೃಷ್ಟ ಬಹಮಾನ ಯೋಜನೆ ಪ್ರಯುಕ್ತ ಅದೃಷ್ಟ ಬಹುಮಾನದ ಚೀಟಿಯನ್ನು ದೇವಸ್ಥಾನದ ಆವರಣದಲ್ಲಿ ಚೀಟಿ ಎತ್ತುವ ಮೂಲಕ ತೆಗೆಯಲಾಗಿದ್ದು ಚೀಟಿ ನಂಬರ್ 1313ರ ನಂಬರಿಗೆ ಪ್ರಥಮ ಬಹುಮಾನ ಬಂದಿದ್ದು ಸುಮಾರು 1 ಲಕ್ಷ ರೂ. ಬೆಲೆ ಬಾಳುವ ಬೈಕ್ ಇಲ್ಲಿನ ರಾಮಕೃಷ್ಣ ಶಾಲೆಯ ದೈಹಿಕ ಶಿಕ್ಷಕಿಯಾದ ಅಮೃತರವರಿಗೆ ಬಂದಿದೆ.
ಸಮಾಧಾನಕರ ಬಹುಮಾನದ ನಂಬರ್ 12263, 24616, 31428, 42788 ಹಾಗೂ 52434 ನಂಬರ್ಗಳು ಚೀಟಿ ಮೂಲಕ ತೆಗೆಯಲಾಗಿದ್ದು ಬಹುಮಾನ ಬಂದವರು ಬಹುಮಾನವನ್ನು ತೆಗೆದುಕೊಂಡು ಹೋಗಬೇಕೆಂದು ದೇವಸ್ಥಾನ ಕಮಿಟಿಯ ಸದಾಶಿವ ಶ್ರೇಷ್ಟಿಯವರು ಈ ಮೂಲಕ ಕೇಳಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ದೇವಸ್ಥಾನ ಕಮಿಟಿಯ ಸದಾಶಿವ ಶ್ರೇಷ್ಟಿ, ವಿಷ್ಣುಮೂರ್ತಿ, ಕೃಷ್ಣವೇಣಿ, ವಿಜೇಂದ್ರ ಶೇಟ್, ರವಿಶೇಟ್, ದಿನೇಶ್ ಶಾನುಬೋಗ್ ನಾಗರಾಜ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.