ಆರ್.ಎಂ.ಎಂ. ಮನೆ ಮೇಲೆ E.D. ದಾಳಿ ; DCC Bank ನಿರ್ದೇಶಕ ಎಂ.ಎಂ. ಪರಮೇಶ್ ಖಂಡನೆ
ಹೊಸನಗರ: ಸಹಕಾರಿ ದುರೀಣ ಹಾಗೂ ಇತ್ತೀಚೆಗೆ ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷರಾಗಿರುವರ ಜನ ಬೆಂಬಲ ಕಂಡು ವಿರೋಧಿಗಳ ಅಸೂಯೆಯಿಂದ ಆರ್.ಎಂ. ಮಂಜುನಾಥ ಗೌಡರವರ 3 ಮನೆಯ ಮೇಲೆ ಇಡಿ ದಾಳಿ ನಡೆಸಿದ್ದು ಇವರ ದಾಳಿಯನ್ನು ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಹಾಗೂ ರಿಪ್ಪನ್ಪೇಟೆ ಸೊಸೈಟಿಯ ಅಧ್ಯಕ್ಷ ಎಂ.ಎಂ.ಪರಮೇಶ್ರವರು ಖಂಡಿಸಿದ್ದಾರೆ.
ಅವರು ಹೊಸನಗರದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿ, ಇವರು ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷರಾಗುವ ಸಂದರ್ಭದಲ್ಲಿ ಸಾವಿರಾರು ಜನ ಇವರ ಬೆಂಬಲಕ್ಕೆ ನಿಲ್ಲುವುದರ ಜೊತೆಗೆ ಕೆಲವು ತಾಲ್ಲೂಕುಗಳಲ್ಲಿ ಇವರಿಗೆ ಅಭಿನಂದನೆಗಳ ಮಹಾಪೂರ ಒದಗಿರುವುದನ್ನು ನೋಡಿ ವಿರೋಧ ಪಕ್ಷದವರಿಗೆ ಹೊಟ್ಟೆ ಉರಿ ತಡೆಯಲಾಗದೇ ಇಡಿ ದಾಳಿ ನಡೆಸಿದ್ದಾರೆ.
ಇವರು ಯಾವುದೇ ದಾಳಿಗಳಿಗೂ ಹೆದರುವ ವ್ಯಕ್ತಿಯಲ್ಲ. ಅಂತಹ ಡಿ.ಸಿ.ಸಿ ಬ್ಯಾಂಕ್ ಹಗರಣ ಮಾಡಿದ್ದಾರೆ ಎಂದು ಬಿಂಬಿಸಿದರೂ ತಲೆ ಕೆಡಿಸಿಕೊಳ್ಳದೆ ನ್ಯಾಯಾಲಯದಲ್ಲಿ ಜಯಶಾಲಿಯಾಗಿ ಬಂದಿದ್ದಾರೆ. ಮಂಜುನಾಥ ಗೌಡರವರ ವರ್ಚಸ್ಸು ಕಡಿಮೆ ಮಾಡಬೇಕೆಂದು ಇಂತಹ ದಾಳಿ ನಡೆಸುತ್ತಿದ್ದು ಇವರ ಬೆಂಬಲಕ್ಕಾಗಿ ಜನಸಾಗರವೇ ಹರಿದು ಬರುತ್ತಿದೆ. ಯಾವ ವಿರೋಧಿ ಗುಂಪು ಮಂಜುನಾಥ ಗೌಡರವರಿಗೆ ಮಾಡಲು ಸಾಧ್ಯವಿಲ್ಲ ಎಂದರು.