ಇಸ್ಪೀಟ್ ಅಡ್ಡೆ ಮೇಲೆ ಹೊಸನಗರ ಪೊಲೀಸರ ದಾಳಿ ; 9 ಮಂದಿ ಅಂದರ್, ₹ 80 ಸಾವಿರ ವಶಕ್ಕೆ !

0 1,551

ಹೊಸನಗರ : ಇಸ್ಪೀಟ್ ಅಡ್ಡೆ ಮೇಲೆ ಹೊಸನಗರ ಪೊಲೀಸರು ದಾಳಿ ನಡೆಸಿ 9 ಆರೋಪಿಗಳನ್ನು ಬಂಧಿಸಿ 80 ಸಾವಿರ ರೂ. ನಗದು ವಶ ಪಡೆದ ಘಟನೆ ತಾಲೂಕಿನ ಹೆಬೈಲು ದೇವಸ್ಥಾನ ಬಳಿ ನಡೆದಿದೆ.

ಹೆಬೈಲು ಸೋಮೇಶ್ವರ ದೇವಸ್ಥಾನದ ಬಳಿ ಅರಣ್ಯ ಪ್ರದೇಶದಲ್ಲಿ ಹಣವನ್ನು ಪಣಕಿಟ್ಟು ಅಂದರ್ ಬಾಹರ್ ಇಸ್ಪೀಟ್ ಆಟವನ್ನು ಕಾನೂನು ಬಾಹಿರವಾಗಿ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಹೊಸನಗರ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಶಿವಾನಂದ ವೈ.ಕೆ. ಮತ್ತವರ ಸಿಬ್ಬಂದಿಗಳು ದಾಳಿ ನಡೆಸಿದ್ದಾರೆ.

ಆನಂದಪುರ ಹಾಗೂ ಸಾಗರ ವಾಸಿಗಳಾದ ಸುರೇಶ ಬಿನ್ ಶ್ರೀಧರ, ಹಾಲಪ್ಪ ಬಿನ್ ಕೃಷ್ಣಪ್ಪ, ಸುಪ್ರಿತ್ ಬಿನ್ ಕೆಂಚಪ್ಪ, ಭಾಸ್ಕರ ಬಿನ್ ಮೋಹನ್, ರಫೀಕ್ ಬಿನ್ ಇಬ್ರಾಹಿಂ, ಕಾರ್ತಿಕ ಬಿನ್ ಪರಶುರಾಮ, ಪುರಪ್ಪೆಮನೆಯ ಉಪೇಂದ್ರ ಬಿನ್ ಸಂಜೀವ, ಉದಯ ಬಿನ್ ಸಂತೋಷ್, ಟಿಲ್ಲರ್ ಮಂಜು ರವರುಗಳನ್ನು ಬಂಧಿಸಿ ಜೂಜಾಟಕ್ಕೆ ತೊಡಗಿಸಿಕೊಂಡಿದ್ದ 80,500 ರೂ.ಗಳನ್ನು, 52 ಇಸ್ಪೀಟ್ ಕಾರ್ಡ್, ಚಾರ್ಜರ್ ಲೈಟ್ ಮತ್ತು ಟಾರ್ಪಲ್ ವಶಪಡಿಸಿಕೊಂಡು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಎಸ್‌ಪಿ ಮಿಥುನ್ ಕುಮಾರ್ ಜಿ.ಕೆ, ಎಎಸ್‌ಪಿ ಅನಿಲ್ ಕುಮಾರ್ ಎನ್ ಬೂಮರೆಡ್ಡಿ, ತೀರ್ಥಹಳ್ಳಿ ಉಪ ವಿಭಾಗದ ಡಿವೈಎಸ್‌ಪಿ ಗಜಾನನ ಎಂ ಸುತಾರ, ಸರ್ಕಲ್ ಇನ್ಸ್‌ಪೆಕ್ಟರ್ ಗುರಣ್ಣ ಎಸ್ ಹೆಬ್ಬಾಳ್ ಮಾರ್ಗದರ್ಶನದಲ್ಲಿ ಸಬ್ ಇನ್ಸ್‌ಪೆಕ್ಟರ್ ಶಿವಾನಂದ ವೈ ಕೆ ರವರು ಸಿಬ್ಬಂದಿಗಳಾದ ಈರೇಶ್, ಗಂಗಪ್ಪ ಬಟ್ಟೋಲಿ, ಸುನಿಲ್ ತೀರ್ಥೇಶ್, ಶಶಿಧರ, ಸಂತೋಷ್ ನಾಯಕ್, ಗೋಪಾಲಕೃಷ್ಣ, ಅವಿನಾಶ್, ಮಹೇಶ, ಸಂದೀಪ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Leave A Reply

Your email address will not be published.

error: Content is protected !!