ಗಮಕ ಪರೀಕ್ಷೆಯಲ್ಲಿ ಗಾಯತ್ರಿ ಅರುಣ್’ಗೆ ದ್ವಿತೀಯ ರ್ಯಾಂಕ್
ಹೊಸನಗರ : ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು ಇವರು ನಡೆಸುವ ಗಮಕ ಪರೀಕ್ಷೆಗಳಲ್ಲಿ ಮೂರನೇ ಹಂತದ ಪ್ರೌಢ ಪರೀಕ್ಷೆಯಲ್ಲಿ ಗಾಯತ್ರಿ ಅರುಣ್ ದ್ವಿತೀಯ ರ್ಯಾಂಕ್ ಪಡೆದಿದ್ದಾರೆ.
ಇವರು ಹೊಸನಗರದ ರಾಗ ಲಹರಿ ಸಂಗೀತ ಮತ್ತು ಗಮಕ ಶಾಲೆಯ ಶಿಕ್ಷಕಿ ಅನುಪಮ ಸುರೇಶ್ ಇವರ ಬಳಿ ಗಮಕವನ್ನು ಅಭ್ಯಾಸ ಮಾಡಿದ್ದಾರೆ.
ಈ ಶಾಲೆಯ ಉಳಿದ ವಿಧ್ಯಾರ್ಥಿಗಳು ಕೂಡ ಡಿಸ್ಟಿಂಕ್ಷನ್ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಶಾಲೆಗೆ ಕೀರ್ತಿ ತಂದಿದ್ದಾರೆ.
ಇವರ ಈ ಸಾಧನೆಯು ಇತರ ಗಮಕದ ವಿದ್ಯಾರ್ಥಿಗಳಿಗೆ ಪ್ರೇರಕವಾಗಿ ಹೆಚ್ಚಿನ ಗಮಕ ಪ್ರಸಾರವನ್ನು ಸಾಧಿಸುತ್ತದೆ ಎನ್ನುವ ಆಶಯವನ್ನು ಶಾಲೆಯು ಹೊಂದಿದ್ದು ಗಾಯತ್ರಿ ಅರುಣ್ ಅವರಿಗೆ ಗಮಕ ಶಾಲೆಯು ಹೃತ್ಪೂರ್ವಕ ಅಭಿನಂದನೆಗಳನ್ನು ಈ ಮೂಲಕ ಸಲ್ಲಿಸಿದೆ.