ತೀರ್ಥಹಳ್ಳಿ ; ಜಯಚಾಮರಾಜೇಂದ್ರ ಸೇತುವೆ ಮೇಲೆ ನಾಳೆ ಇಡೀ ದಿನ ಸಂಚಾರ ಬಂದ್ ! ಯಾಕೆ ?
ತೀರ್ಥಹಳ್ಳಿ: ತೀರ್ಥಹಳ್ಳಿ – ಕೊಪ್ಪ ಸಂಪರ್ಕ ಕಲ್ಪಿಸುವ ಪ್ರಸಿದ್ಧ ಜಯಚಾಮರಾಜೇಂದ್ರ ತುಂಗಾ ಕಮಾನು ಸೇತುವೆ ಮರು ಡಾಂಬರೀಕರಣ ಮಾಡಲಾಗುತ್ತಿರುವ ಹಿನ್ನಲೆಯಲ್ಲಿ ಫೆ.14 ರಂದು ಈ ಸೇತುವೆ ಮೇಲೆ ಇಡೀ ದಿನ ಸಂಚಾರ ನಿರ್ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾರ್ವಜನಿಕರು, ವಾಹನ ಚಾಲಕರು ಹೊಸದಾಗಿ ನಿರ್ಮಾಣವಾಗಿರುವ ತುಂಗಾ ಸೇತುವೆಯನ್ನು ಸಂಚಾರಕ್ಕೆ ಬಳಸಬೇಕು ಎಂದು ಹೆದ್ದಾರಿ ಇಲಾಖೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈಗಾಗಲೇ ಕುರುವಳ್ಳಿಯಿಂದ ಬಾಳೆಬೈಲಿನವರೆಗೆ ಹೊಸ ಸೇತುವೆ ನಿರ್ಮಾಣಗೊಂಡಿದ್ದು ಸಂಚಾರ ಪ್ರಾರಂಭವಾಗಿದೆ.