ಪ್ರತಿಭಾ ಕಾರಂಜಿ, ಐಶ್ವರ್ಯ ರಾಜ್ಯ ಮಟ್ಟಕ್ಕೆ ಆಯ್ಕೆ

0 825

ಹೊಸನಗರ: ಶಿವಮೊಗ್ಗ ಜಿಲ್ಲಾಮಟ್ಟದ ಪ್ರತಿಭಾಕಾರಂಜಿ ಹಾಗೂ ಕಲೋತ್ಸವದಲ್ಲಿ ಕನ್ನಡ ಭಾಷಣ ಸ್ಪರ್ಧೆಯಲ್ಲಿ ಹೊಸನಗರದ ವಿದ್ಯಾರ್ಥಿನಿ ಐಶ್ವರ್ಯ ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.


ಈಕೆ ಗುರೂಜಿ ಇಂಟರ್ ನ್ಯಾಷನಲ್ ಶಾಲೆಯ 10ನೇ ತರಗತಿಯಲ್ಲಿ ಓದುತ್ತಿದ್ದು, ಶಿಕ್ಷಕ ವಿನಾಯಕ ನಾವುಡ ಹಾಗೂ ಭವಾನಿ ಭಟ್ ಪುತ್ರಿ.

ಅರ್ಜುನ್‌ರಾಜ್‍ಗೆ ದ್ವಿತೀಯ ಸ್ಥಾನ
ಶಿವಮೊಗ್ಗ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವದಲ್ಲಿ ಆಶುಭಾಷಣ ಸ್ಪರ್ಧೆಯಲ್ಲಿ ಹೊಸನಗರದ ವಿದ್ಯಾರ್ಥಿ ಅರ್ಜುನ್ ರಾಜ್ ದ್ವಿತೀಯ ಸ್ಥಾನ ಗಳಿಸಿದ್ದಾನೆ.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ 8ನೇ ತರಗತಿಯಲ್ಲಿ ಓದುತ್ತಿರುವ ಈತ ಶಿಕ್ಷಕ ದಂಪತಿ ಅಂಜು ಹಾಗೂ ವಿ.ಡಿ. ನಾಗರಾಜ ಪುತ್ರ.

Leave A Reply

Your email address will not be published.

error: Content is protected !!