ಭಾರತ ಮಾತೆಯನ್ನು ಅವಮಾನಿಸಿದರೆ ಅಂತವರನ್ನು ಗಲ್ಲಿಗೇರಿಸಿ ; ನಿಟ್ಟೂರು ಸುಬ್ರಹ್ಮಣ್ಯ

0 231

ಹೊಸನಗರ: ನಮ್ಮ ದೇಶ ಶಾಂತಿಪ್ರಿಯ ದೇಶ, ಇಲ್ಲಿ ಎಲ್ಲರೂ ಸೌಹಾರ್ಧತೆಯಿಂದ ಯಾವುದೇ ಜಾತಿ ಧರ್ಮ ಎಂದು ದ್ವೇಷ ಬೆಳೆಸದೆ ನಾವೆಲ್ಲರೂ ಒಗ್ಗಟ್ಟಾಗಿರುವಾಗ ಕೆಲವು ಕಿಡಿಗೇಡಿಗಳು ಅಲ್ಲಲ್ಲಿ ವಿಷ ಬೀಜ ಬಿತ್ತಿ ದೇಶವನ್ನು ಅಶಾಂತಿಯತ್ತಾ ಸಾಗಿಸಲು ಹೊರಟಿದ್ದಾರೆ. ಭಾರತ ಮಾತೆಯನ್ನು ಅವಮಾನಿಸಿದರೆ ನಾವು ಎಂದಿಗೂ ಸಹಿಸುವುದಿಲ್ಲ. ಭಾರತ ಮಾತೆಯನ್ನು ಅವಮಾನಿಸುವವರನ್ನು ನಮ್ಮ ದೇಶವನ್ನು ಅಪಮಾನಿಸುವವರನ್ನೂ ತಕ್ಷಣ ಗಲ್ಲಿಗೇರಿಸಬೇಕೆಂದು ಹೊಸನಗರ ತಾಲ್ಲೂಕು ಬಿಜೆಪಿ ಅಧ್ಯಕ್ಷ ನಿಟ್ಟೂರು ಸುಬ್ರಹ್ಮಣ್ಯ ಹೇಳಿದರು.

ಪಟ್ಟಣದ ಮಾವಿನಕೊಪ್ಪದಿಂದ ಬಸ್ ನಿಲ್ದಾಣ ಆವರಣದವರೆಗೆ ಬಿಜೆಪಿ ಯುವ ಮೋರ್ಚ ಹೊಸನಗರ ಮಂಡಲದಿಂದ ದೇಶ ಮೊದಲು ಎಂಬ ಘೋಷಣೆಯೊಂದಿಗೆ ತ್ರಿವರ್ಣ ಧ್ವಜದೊಂದಿಗೆ ಒಂದು ನಡುಗೆ ಸದೃಢ ಭಾರತಕ್ಕಾಗಿ ಸುರಕ್ಷಿತ ಕರ್ನಾಟಕ ಎಂಬ ಘೋಷಣೆಯೊಂದಿಗೆ ಮೆರವಣಿಗೆ ನಡೆಸಿ ಬಸ್ ನಿಲ್ದಾಣ ಆವರಣದಲ್ಲಿ ಸಭೆ ನಡೆಸಿ ಮಾತನಾಡಿದರು.

ಇತ್ತೀಚೆಗೆ ಬೆಂಗಳೂರು ವಿಧಾನಸಭೆಯ ಆವರಣದಲ್ಲಿ ನಾಸೀರ್ ಹುಸೇನ್ ಗೆದ್ದ ಸಂದರ್ಭದಲ್ಲಿ ನಮ್ಮ ಶತ್ರು ದೇಶದ ಪರ ಕಿಡಿಗೇಡಿಗಳು ಜಯಘೋಷ ಕೂಗಿದ್ದಾರೆ. ಇಂಥವರ ವಿರುದ್ಧ ನಮ್ಮ ಭ್ರಷ್ಠ ರಾಜ್ಯ ಸರ್ಕಾರ ಇನ್ನೂ ಕ್ರಮ ಕೈಗೊಂಡಿಲ್ಲ ಇಂಥಹ ದೇಶ ವಿರೋಧಿಗಳನ್ನು ಸುಮ್ಮನೆ ಬಿಟ್ಟರೇ ಮುಂದೊಂದು ದಿನ ನಮ್ಮ ಭಾರತ ದೇಶಕ್ಕೆ ಕಂಠಕವಾಗುವುದರಲ್ಲಿ ಅನುಮಾನವಿಲ್ಲ. ತಕ್ಷಣ ದೇಶಕ್ಕೆ ಅವಮಾನ ಮಾಡುವವರನ್ನು ಬಂಧಿಸಬೇಕೆ‌ಂದರು.

ತಾಲ್ಲೂಕು ಬಿಜೆಪಿ ಮಾಜಿ ಅದ್ಯಕ್ಷ ಗಣಪತಿ ಬಿಳಗೋಡು ಮಾತನಾಡಿ, ಭಾರತ ದೇಶದಲ್ಲಿರುವ ಎಲ್ಲ ಮುಸ್ಲಿಂಮರು ಕೆಟ್ಟವರಲ್ಲ ಕೆಲವು ಮುಸ್ಲಿಂ ಬಂಧುಗಳು ದೇಶದ ಸ್ವಾತಂತ್ರ್ಯದಲ್ಲಿ ಭಾಗವಹಿಸುವುದರ ಜೊತೆಗೆ ಪ್ರಾಣ ತ್ಯಾಗ ಮಾಡಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ರಾಜಕೀಯ ಪಿತೂರಿಯಿಂದ ದೇಶದಲ್ಲಿ ಅಶಾಂತಿ ಸೃಷ್ಠಿಸಲು ಹೊರಟಿರುವುದು ಮತ್ತು ಮುಸ್ಲಿಂ ಜನಾಂಗವನ್ನು ಒಲೈಸುತ್ತಿರುವುದು ನಾಚಿಗೆಗೇಡಿನ ಸಂಗತಿಯಾಗಿದ್ದು ಈ ರೀತಿ ಸೃಷ್ಠಿಕರಿಸಿ ಬೆಳೆಸುತ್ತಿರುವ ರಾಜಕೀಯ ಮುಖಂಡರಿಗೆ ಒಂದಲ್ಲ ಒಂದು ದಿನ ಅವರೇ ಇವರಿಗೆ ಶತ್ರುವಾಗುವುದರಲ್ಲಿ ಅನುಮಾನವಿಲ್ಲ. ತಕ್ಷಣ ವಿಧಾನಸಭೆಯಲ್ಲಿ ಶತ್ರು ದೇಶದ ಪರ ಘೋಷಣೆ ಕೂಗಿರುವವರನ್ನು ಬಂಧಿಸಬೇಕು ಮತ್ತು ಬೆಂಗಳೂರಿನಲ್ಲಿ ಬಾಂಬ್ ಬ್ಲಾಸ್ಟ್ ಮಾಡಿದವರನ್ನು ಬಂಧಿಸಿ ತಕ್ಕ ಶಿಕ್ಷೆ ನೀಡಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಸುರೇಶ್ ಸ್ವಾಮಿರಾವ್, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಕಾಲಸಸಿ ಸತೀಶ್, ಅಭಿಷೇಕ್, ಚಿಕ್ಕನಕೊಪ್ಪ ಶ್ರೀಧರ, ಬಿಜೆಪಿ ಯುವ ಘಟಕದ ಅಧ್ಯಕ್ಷ ಉಪಾಧ್ಯಕ್ಷ ಕಾರ್ಯದರ್ಶಿಗಳು ಸದಸ್ಯರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!