ಮಣ್ಣಿನ ಹಣತೆಯ ದೀಪಾರಾಧನೆ ಭಾರತೀಯ ಸಂಸ್ಕೃತಿಯ ಪ್ರತೀಕ

0 482

ರಿಪ್ಪನ್‌ಪೇಟೆ: ನಮ್ಮಲ್ಲಿರುವ ಅಂಧಕಾರದ ಕತ್ತಲು ದೂರ ಮಾಡಿ ಬೆಳಕು ಮೂಡಿಸುವುದೇ ಕಾರ್ತಿಕ ದೀಪೋತ್ಸವ ಮಣ್ಣಿನ ಹಣತೆಯ ದೀಪಾರಾಧನೆ ಭಾರತೀಯ ಸಂಸ್ಕೃತಿಯ ಪ್ರತೀಕ ಎಂದು ಸದಾನಂದಶಿವಯೋಗಾಶ್ರಮದ ಮೂಲೆಗದ್ದೆ ಮಠದಲ್ಲಿ ಅಭಿನವ ಚನ್ನಬಸವ ಮಹಾಸ್ವಾಮೀಜಿ ಹೇಳಿದರು.

ಮೂಲೆಗದ್ದೆ ಮಠದಲ್ಲಿ ಆಯೋಜಿಸಲಾದ ಲಿಂಗೈಕ್ಯ ಪೂಜೆ ಶ್ರೀಗಳ ಪುಣ್ಯಾರಾಧನಾ ಕಾರ್ತಿಕ ದೀಪೋತ್ಸವ ಕರ್ತೃ ಗದ್ದುಗೆಗೆ ವಿಶೇಷ ಪೂಜೆ, ಮಾವಿನಹೊಳೆಯಲ್ಲಿ ತೆಪ್ಪೋತ್ಸವ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಇಂದಿನ ಯುವಜನಾಂಗ ಧರ್ಮ ಧಾರ್ಮಿಕ ಅಚರಣೆಗಳಿಂದ ದೂರವಾಗುತ್ತಿದ್ದು ಸಂಸ್ಕೃತಿ ಸಂಸ್ಕಾರವಿಲ್ಲದೆ ಮನೆಯ ಹಿರಿಯರನ್ನು ವೃದ್ದಾಶ್ರಮಕ್ಕೆ ಬಿಡುವುದರ ಬಗ್ಗೆ ಕಳವಳ ವ್ಯಕ್ತಪಡಿಸಿ ಮುಂದಿನ ದಿನಗಳಲ್ಲಿ ತಂದೆ ತಾಯಿಯರವನ್ನು ಮನೆಯಲ್ಲಿಟ್ಟುಕೊಂಡು ನೋಡಿಕೊಳ್ಳುವಂತೆ ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಸದಸ್ಯ ಗಣೇಶ್ ಹಿರೇಮಣತಿ, ಹಾಲೇಶಪ್ಪ, ಜೆ.ಎಸ್.ಚಂದ್ರಪ್ಪ, ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ಚಂದ್ರಮೌಳಿಗೌಡ, ಬಿ.ಯುವರಾಜಗೌಡ, ಮಲ್ಲಿಕಾರ್ಜುನಯ್ಯ, ರುದ್ರಪ್ಪಗೌಡರು ಜಬ್ಬಗೋಡು, ಎತ್ತಿಗೆ ಮಹೇಶಗೌಡ, ರಾಜಶೇಖರಗೌಡ, ಬಿ.ಜೆ.ಜಗದೀಶಗೌಡ, ತಮ್ಮಣ್ಣಗೌಡ, ಇನ್ನಿತರ ಮಠದ ಸದ್ಭಕ್ತರು ಪಾಲ್ಗೊಂಡಿದ್ದರು.

ದೀಪೋತ್ಸವದ ನಂತರ ಜಾನಪದ ಕಲಾವಿದರಿಂದ ಬಸವಣ್ಣನವರ ವಚನ ಗಾಯನ ಮತ್ತು ಕೊಡಚಾದ್ರಿ ಕಾಲೇಜು ವಿದ್ಯಾರ್ಥಿನಿಯರಿಂದ ಭರತನಾಟ್ಯ ಪ್ರದರ್ಶನ ಕಾರ್ಯಕ್ರಮ ಜರುಗಿತು.

Leave A Reply

Your email address will not be published.

error: Content is protected !!