ರಿಪ್ಪನ್ಪೇಟೆಯಲ್ಲಿ ಜಿ.ಎಸ್.ಬಿ. ಸಮಾಜದವರಿಂದ ಸಂಸದ ಬಿ.ವೈ.ರಾಘವೇಂದ್ರರಿಗೆ ಸನ್ಮಾನ
ರಿಪ್ಪನ್ಪೇಟೆ: ಜಿ.ಎಸ್.ಬಿ.ಸಮಾಜದವರಿಗೆ ಸರ್ಕಾರದಿಂದ ಅನುದಾನ ಕೊಟ್ಟಿಲ್ಲ ಮುಂದಿನ ದಿನಗಳಲ್ಲಿ ಆ ಸಮಾಜದವರಿಗೂ ಸರ್ಕಾರದ ಆನುದಾನವನ್ನು ಕೊಡಿಸುವುದಾಗಿ ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
ರಿಪ್ಪನ್ಪೇಟೆಯ ಜಿ.ಎಸ್.ಬಿ.ಕಲ್ಯಾಣ ಮಂದಿರದಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಭಾಗವಹಿಸಿದ ಸಂದರ್ಭದಲ್ಲಿ ಜಿ.ಎಸ್.ಬಿ.ಸಮಾಜದವರ ಸಂಸದ ಬಿ.ವೈ.ರಾಘವೇಂದ್ರ ಸನ್ಮಾನ ಸ್ವೀಕರಿಸಿ ಮಾತನಾಡಿ, ಜಿಲ್ಲೆಯಲ್ಲಿನ ಸಣ್ಣ-ಪುಟ್ಟ ಜನಾಂಗದ ಸಮಾಜಭಾಂದವರು ಸಮುದಾಯ ಭವನ ನಿರ್ಮಾಣಕ್ಕಾಗಿ ಸರ್ಕಾರದ ಅನುದಾನವನ್ನು ಪಡೆದಿದ್ದಾರೆ.ಅದರೆ ಜಿ.ಎಸ್.ಬಿ.ಸಮಾಜದವರು ಮಾತ್ರ ಆನುದಾನ ಪಡೆಯುವಲ್ಲಿ ನಿರ್ಲಕ್ಷ್ಯಿಸಿದಂತಾಗಿದೆ. ಮುಂದಿನ ದಿನಗಳಲ್ಲಿ ಆ ಸಮಾಜಕ್ಕೂ ಅನುದಾನ ಕೊಡಿಸುವ ಭರವಸೆಯನ್ನು ಸಂಸದ ರಾಘವೇಂದ್ರ ನೀಡಿದರು.
ಜಿ.ಎಸ್.ಬಿ.ಸಮಾಜದ ಅಧ್ಯಕ್ಷ ಗಣೇಶ ಎನ್ ಕಾಮತ್, ಮಾಜಿ ಸಚಿವ ಹರತಾಳು ಹಾಲಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್, ಆರ್.ಎಸ್.ಎಸ್. ಪ್ರಮುಖ ಕಾರ್ತಿಕ್ ಎನ್ ನಾಯ್ಕ್, ಬಾಳೂರು ಗೇರು ಬೀಜ ಫ್ಯಾಕ್ಟರಿ ಮಾಲೀಕರು ಮತ್ತು ಜಿ.ಎಸ್.ಬಿ.ಸಮಾಜದ ಪ್ರಮುಖರು ಪಾಲ್ಗೊಂಡಿದ್ದರು.