ಸಂವಿಧಾನದ ಕಾನೂನಿನ ಚೌಕಟ್ಟು ಮೀರಿ ನಡೆದರೆ ಶಿಕ್ಷೆ ಕಟ್ಟಿಟ್ಟ ಬುತ್ತಿ ; ತಹಶೀಲ್ದಾರ್ ರಶ್ಮಿ

0 344

ಹೊಸನಗರ: 1950 ಜನವರಿ 26ರಲ್ಲಿ ಜಾರಿಗೆ ಬಂದಿರುವ ನಮ್ಮ ಸಂವಿಧಾನದಲ್ಲಿ ಯಾವುದೇ ತೊಂದರೆಯಿಲ್ಲದೇ ಈ ದೇಶದಲ್ಲಿ ಕಾನೂನಿನ ಅಡಿಯಲ್ಲಿ ಜೀವನ ಸಾಗಿಸಲು ಯಾವುದೇ ಅಡ್ಡಿ ಆತಂಕಗಳಿಲ್ಲ‌. ಆದರೆ, ಸಂವಿಧಾನದ ಕಾನೂನಿನ ಚೌಕಟ್ಟು ಮೀರಿ ನಡೆದರೆ ಅಂತವರಿಗೆ ಶಿಕ್ಷೆ ಗ್ಯಾರಂಟಿ ಎಂದು ಹೊಸನಗರದ ತಹಶೀಲ್ದಾರ್ ರಶ್ಮಿ ಹೇಳಿದರು.

ಪಟ್ಟಣದ ನೆಹರು ಮೈದಾನದಲ್ಲಿ 75ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಧ್ವಜವಂದನೆ ಸ್ವೀಕರಿಸಿ ಮಾತನಾಡಿದ ಅವರು, ಭಾರತ ದೇಶ ಅದೆಷ್ಟೋ ಜಾತಿ, ಧರ್ಮ, ಮತ, ಪಂಥ, ಪಂಗಡ ಹಾಗೆ ನಾನಾ ವಿಶೇಷಗಳನ್ನೊಳಗೊಂಡ ಪ್ರಜಾಪ್ರಭುತ್ವ ದೇಶ 1947ರಲ್ಲಿ ಬ್ರಿಟಿಷರ ಕೈ ಮುಷ್ಠಿಯಿಂದ ಹೊರಬಂದು ಸ್ವಾತಂತ್ರ ಪಡೆದ ಭಾರತ ಅಂದಿನಿಂದ ಇಂದಿನವರೆಗೂ ಕಾನೂನಿನ ಚೌಕಟ್ಟಿನಲ್ಲಿ ಎತ್ತರಕ್ಕೆ ಬೆಳೆಯುತ್ತ ಸಾಗುತ್ತಿದೆ. ಪ್ರತಿ ದೇಶದ ಬೆಳವಣಿಗೆಯಲ್ಲಿ ಆದೇಶದ ಸಂವಿಧಾನದ ಪಾತ್ರ ಪ್ರಮುಖ ಪ್ರಬಲವಾಗಿದ್ದರೆ ಮಾತ್ರ ಅಂತಹ ದೇಶ ಮುಂದುವರೆದು ಬೆಳೆಯಲು ಸಾಧ್ಯ. ಪ್ರತಿ ಭಾರತೀಯರು ಈ ದಿನವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಮತ್ತು ಮರೆಯಬಾರದು ಸಂವಿಧಾನದ ಅಡಿಯಲ್ಲಿ ಬದುಕು ಕಟ್ಟಿಕೊಂಡು ಹೋದರೆ ಎಂತಹ ಅಡ್ಡಿ ಅತಂಕಗಳು ಬರುವುದಿಲ್ಲ ಬಂದರೂ ಕಾನೂನಿನ ಚೌಕಟ್ಟಿನಲ್ಲಿ ನ್ಯಾಯ ಸಿಗಲಿದೆ.

1947ರಲ್ಲಿ ಭಾರತ ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಎಲ್ಲರೂ ಸಂಭ್ರಮಿಸಿ ಕುಣಿದು ಕುಪ್ಪಳಿಸಿದರು ಬ್ರಿಟಿಷರ ಆಳ್ವಿಕೆಯಿಂದ ಮುಕ್ತಿ ಹೊಂದಿದ ಸಂತೋಷ ಎಲ್ಲರಲ್ಲೂ ಮೂಡಿತ್ತು ಆದ್ರೆ ಆ ಸಮಯದಲ್ಲಿ ಭಾರತದಂತಹ ದೇಶಕ್ಕೆ ಒಂದು ಪ್ರಬಲ ಸಂವಿಧಾನದ ಅವಶ್ಯಕತೆ ಇತ್ತು ಒಂದು ಪ್ರಬಲ ಸಂವಿಧಾನವನ್ನು ಭಾರತ ದೇಶಕ್ಕೆ ಧಾರೆ ಎರೆವ ಜವಾಬ್ದಾರಿ ಡಾ|| ಬಿ.ಆರ್ ಅಂಬೇಡ್ಕರ್‌ರವರು ನೀಡಿದ್ದು, ನಮ್ಮ ದೇಶ ಸುಭದ್ರವಾಗಿ ಅಬಿವೃದ್ಧಿ ದೇಶವಾಗಿ ಹೊಂದಲು ಕಾರಣವಾಗಿದೆ ಪ್ರತಿಯೊಬ್ಬರು ನಮ್ಮ ಸಂವಿಧಾನದ ಚೌಕಟ್ಟಿನಲ್ಲಿ ಬದುಕಿ ಮುಂದಿನ ಪೀಳಿಗೆಗೆ ದಾರಿ ದೀಪವಾಗೋಣ ಎಂದರು.

ಈ ವರ್ಷ ನೀರನ್ನು ಮಿತವಾಗಿ ಬಳಸಿ:
ರಾಜ್ಯದ ಅನೇಕ ತಾಲ್ಲೂಕುಗಳಲ್ಲಿ ಮಳೆಯ ಅಭಾವದಿಂದ ಬರಗಾಲವಾಗಿದೆ. ಮಲೆಯಿಲ್ಲದೇ ಕೆಲವು ಭಾಗಗಳಲ್ಲಿ ನೀರಿನ ಅಭಾವವಾಗುತ್ತಿದೆ. ನಮ್ಮ ತಾಲ್ಲೂಕಿನ ಜನರು ಈ ವರ್ಷ ಹಂಡೆ ಸ್ನಾನ ಮಾಡುವ ಬದಲು ತಂಬಿಗೆ ಸ್ನಾನ ಮಾಡಿ ನೀರನ್ನು ಮಿತವಾಗಿ ಬಳಸಿ ಈ ವರ್ಷ ನಾವು ನೀವೆಲ್ಲರೂ ಸೇರಿ ಬರಗಾಲ ಎದುರಿಸೋಣ ಎಲ್ಲರೂ ನಮ್ಮೊಂದಿಗೆ ಕೈ ಜೋಡಿಸಬೇಕೆಂದರು.

75ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರನ್ನು ಅದ್ಧೂರಿಯಾಗಿ ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಕಾರ್ಯನಿರ್ವಹಣಾಧಿಕಾರಿ ನರೇಂದ್ರಕುಮಾರ್, ಸರ್ಕಲ್ ಇನ್ಸ್‌ಪೆಕ್ಟರ್ ಗುರಣ್ಣ ಎಸ್ ಹೆಬ್ಬಾಳ್, ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಮಾರುತಿ, ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ಬಸವಣ್ಯಪ್ಪ, ನಾಡಹಬ್ಬಗಳ ಸಮಿತಿಯ ಸದಸ್ಯರಾದ ಎನ್ ಶ್ರೀಧರ ಉಡುಪ, ಶ್ರೀನಿವಾಸ್ ಕಾಮತ್, ರಾಜಮೂರ್ತಿ, ವರ್ತಕರ ಸಂಘದ ಅಧ್ಯಕ್ಷ ವಿಜೇಂದ್ರ ಶೆಟ್, ಪಟ್ಟಣ ಪಂಚಾಯಿತಿ ಸದಸ್ಯರಾದ ಗುಲಾಬಿ ಮರಿಯಪ್ಪ, ಕೃಷ್ಣವೇಣಿ, ಗಾಯಿತ್ರಿ ನಾಗರಾಜ್, ಚಂದ್ರಕಲಾ ನಾಗರಾಜ್, ಶಾಹಿನಾ ನಾಸೀರ್, ಇಂಜಿನಿಯರ್ ಮಲ್ಲಿಕಾರ್ಜುನ, ಜೆ.ಜೆ.ಎಂ ಇಂಜಿನಿಯರ್, ಶಿರಾಸ್ಥೆದಾರ್ ಮಂಜುನಾಥ್ ಕಟ್ಟೆ, ಸುಧೀಂದ್ರಕುಮಾರ್, ಪ್ರಥಮ ದರ್ಜೆ ಗುಮಾಸ್ಥರಾದ ಚಿರಾಗ್, ರೆವಿನ್ಯೂ ಇನ್ಸ್‌ಪೆಕ್ಟರ್ ರೇಣುಕಯ್ಯ, ಗ್ರೇಡ್ 2 ತಹಶೀಲ್ದಾರ್ ರಾಕೇಶ್, ನವೀನ್ ಕೌಶಿಕ್, ನಾಗಪ್ಪ, ಅಶೋಕ ಗಣೇಶ್ ಪಟ್ಟಣ ಪಂಚಾಯತಿ ಸದಸ್ಯರುಗಳು ಅಧಿಕಾರಿಗಳ ವರ್ಗ, ವಿವಿಧ ಇಲಾಖೆಯ ಅಧಿಕಾರಿಗಳ ವರ್ಗ ಸಿಬ್ಬಂದಿಗಳ ವರ್ಗದವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ನಂತರ ವಿವಿಧ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು ನಂತರ ವಿದ್ಯಾರ್ಥಿಗಳಿಗೆ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.

Leave A Reply

Your email address will not be published.

error: Content is protected !!