ಹೊಸನಗರದಲ್ಲಿ ಭಾರತ್ ರೈಸ್ ವಿತರಣೆ | ಎಲ್ಲ ವರ್ಗದ ಜನರಿಗೂ ಅಕ್ಕಿ ದೊರೆಯಲಿದೆ ; ಆರಗ ಜ್ಞಾನೇಂದ್ರ

0 577

ಹೊಸನಗರ : ಎಲ್ಲ ವರ್ಗದ ಜನರಿಗೂ ಕೇಂದ್ರ ಸರ್ಕಾರದ ಮೋದಿ ಅಕ್ಕಿ ದೊರೆಯಲಿದೆ ಯಾರು ಸಂಕೋಚ ಪಟ್ಟುಕೊಳ್ಳದೆ ನಿಮಗಾಗಿಯೇ ಮೋದಿಯವರು ಕಳುಹಿಸಿಕೊಟ್ಟಿರುವ ಕಡಿಮೆ ಬೆಲೆಯ 1 ಕೆಜಿಗೆ ಕೇವಲ 29 ರೂಪಾಯಿಗೆ ಸಿಗುವ ಅಕ್ಕಿ ಇದಾಗಿದ್ದು ಪ್ರತಿ ವಾರ ನಿಮ್ಮ ತಾಲ್ಲೂಕಿಗೆ ಸಾಕಷ್ಟು ಅಕ್ಕಿ ಬರಲಿದ್ದು ಸಮದಾನಚಿತ್ತರಾಗಿ 10 ಕೆಜಿಗೆ 290ರೂಪಾಯಿ ದರದಲ್ಲಿ ಪಡೆದುಕೊಳ್ಳಬೇಕೆಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಸುಮಾರು 800 ಮೂಟೆ ಭಾರತ್ ರೈಸ್ ವಿತರಿಸಿ ಮಾತನಾಡಿದ ಅವರು, ಸುಮಾರು ಹತ್ತು ವರ್ಷಗಳಲ್ಲಿ ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾದ ಮೇಲೆ ಸಾಕಷ್ಟು ಪ್ರಮಾಣದಲ್ಲಿ ಭಾರತ ದೇಶ ಅಭಿವೃದ್ಧಿಯಾಗಿದ್ದು ಈಗ ಭಾರತ ದೇಶ ವಿಶ್ವದಲ್ಲಿಯೇ 5ನೇ ಸ್ಥಾನದಲ್ಲಿದೆ ಭಾರತ ದೇಶದ ಜನರಿಗೆ ಸಾಕಷ್ಟು ಅನುಕೂಲ ಮಾಡಿಕೊಡುವುದರ ಜೊತೆಗೆ ವಿಶ್ವದ ಎಲ್ಲ ರಾಷ್ಟ್ರಗಳೊಂದಿಗೆ ಉತ್ತಮ ಭಾಂದವ್ಯವನ್ನು ಹೊಂದಿದ ದೇಶವಾಗಿದೆ ದೇಶವಿಗ ಸುಭದ್ರ ಸ್ಥಿತಿಯಲ್ಲಿದ್ದು ಯಾವ ಶುತ್ರು ರಾಷ್ಟ್ರವೂ ನಮ್ಮನ್ನು ಅಲುಗಡಿಸಲು ಸಾಧ್ಯವಿಲ್ಲದಂತೆ ದೇಶವನ್ನು ಕಟ್ಟಿದ್ದಾರೆ.

ಶಿವಮೊಗ್ಗ ಜಿಲ್ಲೆಗೆ ಬಿ.ವೈ ರಾಘವೇಂದ್ರರವರು ಸಂಸದರಾದ ಮೇಲೆ ಜಿಲ್ಲೆಗೆ ಉತ್ತಮ ಕೆಲಸ ಮಾಡುವುದರ ಜೊತೆಗೆ ಜಿಲ್ಲೆಯ ಪ್ರತಿಯೊಬ್ಬರ ಮನೆಯ ಮನೆ ಮಗನಾಗಿದ್ದಾರೆ. ಇಂದವರು ಜಿಲ್ಲೆಗೆ ಬೇಕು. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಬಲ ಪಡಿಸಬೇಕಾದರೆ ರಾಘವೇಂದ್ರರವರನ್ನು ಗೆಲ್ಲಿಸಿ ಹಾಗೂ ದೇಶ ಸುಭದ್ರವಾಗಿರಬೇಕಾದರೇ ಮೋದಿಯವರನ್ನು ಪ್ರಧಾನಮಂತ್ರಿ ಮಾಡಬೇಕೆಂದು ಕರೆ ನೀಡಿದರು.

ಈ ಅಕ್ಕಿ ವಿತರಣಾ ಸಂದರ್ಭದಲ್ಲಿ ಬಿಜೆಪಿ ಹಿರಿಯರಾದ ಎನ್.ಆರ್. ದೇವಾನಂದ್, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಸುರೇಶ್ ಸ್ವಾಮಿರಾವ್, ಟೌನ್ ಘಟಕದ ಅಧ್ಯಕ್ಷ ಶ್ರೀಪತಿರಾವ್, ಕಾರ್ಯದರ್ಶಿ ಮಂಜುನಾಥ್ ಸಂಜೀವಣ್ಣ ಗಣಪತಿ ಬಿಳಗೋಡು, ಎನ್ ಶ್ರೀಧರ ಉಡುಪ, ಖಜಾಂಚಿ ಕೋಣೆಮನೆ ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಕಾಲಸಸಿ ಸತೀಶ್, ಸತ್ಯನಾರಾಯಣ ವಿ, ವಿಜಯ ಕುಮಾರ್, ಗುಲಾಬಿ ಮರಿಯಪ್ಪ, ಕೃಷ್ಣವೇಣಿ, ಮಂಡಾನಿ ಮೋಹನ್, ಶಾಸಕರ ಆಪ್ತ ಕಾರ್ಯದರ್ಶಿ ಬಸವರಾಜ್, ನರಲೆ ರಮೇಶ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!