ಹೋಟೆಲೊಂದರ ಕಾರ್ವಿುಕನನ್ನು ಬೆದರಿಸಿ ಹಲ್ಲೆ ಮಾಡಿ ಹಣ, ಮೊಬೈಲ್ ದೋಚಿ ಪರಾರಿಯಾಗಿದ್ದ ತೀರ್ಥಹಳ್ಳಿ ವ್ಯಕ್ತಿ ಕುಮಟಾ ಪೊಲೀಸರ ಬಲೆಗೆ !

0 81

ತೀರ್ಥಹಳ್ಳಿ : ಕುಮಟಾ ಪಟ್ಟಣದ ಹೋಟೆಲೊಂದರ ಕಾರ್ವಿುಕನನ್ನು ಬೆದರಿಸಿ ಹಲ್ಲೆ ಮಾಡಿ ಹಣ ಹಾಗೂ ಮೊಬೈಲ್ ದೋಚಿ ಪರಾರಿಯಾಗಿದ್ದ ಆರೋಪಿಯನ್ನು ಕುಮಟಾ ಪೊಲೀಸರು ತ್ವರಿತವಾಗಿ ಪತ್ತೆ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತೀರ್ಥಹಳ್ಳಿ ತಾಲೂಕಿನ ಕಮ್ಮರಡಿ ನಿವಾಸಿ ಸುಬ್ರಹ್ಮಣ್ಯ ಪ್ರದೀಪ ತಿಪ್ಪೇಸ್ವಾಮಿ ಬಂಧಿತ ವ್ಯಕ್ತಿಯಾಗಿದ್ದು, ಈತ ಪಟ್ಟಣದ ಸುಖಸಾಗರ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಹೆಗಡೆಯ ಶಿವಪುರ ನಿವಾಸಿ ಕೃಷ್ಣ ಮಂಜಯ್ಯ ಶೆಟ್ಟಿ ಎಂಬವರ ಮೇಲೆ ಜುಲೈ14 ರ ಮಧ್ಯರಾತ್ರಿ ಹಲ್ಲೆ ಮಾಡಿದ್ದಾನೆ.

ಬಳಿಕ ಕಿಸೆಯಲ್ಲಿ ಇದ್ದ 4500 ರೂ. ನಗದು ಮತ್ತು 2 ಮೊಬೈಲ್ ಫೋನ್ಗಳನ್ನು ದೋಚಿ ಪರಾರಿಯಾಗಿದ್ದ. ಈ ಕುರಿತು ಕೃಷ್ಣಶೆಟ್ಟಿ ಅವರ ದೂರಿನ ಅಧಾರದ ಮೇಲೆ ತನಿಖೆ ಕೈಗೊಂಡ ಪೋಲಿಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಿಪಿಐ ತಿಮ್ಮಪ್ಪ ನಾಯ್ಕ, ಪಿಎಸ್​ಐ ನವೀನ ಎಸ್. ನಾಯ್ಕ, ಪಿಎಸ್​ಐ ಪದ್ಮಾ ದೇವಳಿ, ಸಿಬ್ಬಂದಿ ಗಣೇಶ ನಾಯ್ಕ, ದಯಾನಂದ ನಾಯ್ಕ, ಗುರು ನಾಯಕ, ಪ್ರದೀಪ ನಾಯಕ, ಶಿವಾನಂದ ಜಾಡರ್ ತಂಡ ಆರೋಪಿಯನ್ನು ಕೃತ್ಯ ನಡೆದ 24 ಗಂಟೆಯಲ್ಲಿ ಪತ್ತೆ ಮಾಡಿ ಬಂಧಿಸಿದ್ದಾರೆ.

Leave A Reply

Your email address will not be published.

error: Content is protected !!