NHM ಯೋಜನೆಯಡಿ ಸಹಾಯಧನ ಪಡೆಯಲು ರೈತರಿಂದ ಅರ್ಜಿ ಆಹ್ವಾನ

Written by Mahesha Hindlemane

Published on:

ಹೊಸನಗರ ; 2026- 27ನೇ ಸಾಲಿನ ರಾಷ್ಟ್ರೀಯ ತೋಟಗಾರಿಕಾ ಮಿಷನ್ (NHM) ಯೋಜನೆಯಡಿಯಲ್ಲಿ ಅಡಿಕೆ ಎಲೆಚುಕ್ಕೆ ರೋಗದ ನಿಯಂತ್ರಣಕ್ಕೆ ಹೊಸನಗರ ತಾಲೂಕಿನ ರೈತ ಬಾಂಧವರು ಮೈಲುತುತ್ತ, ಪ್ರೋಪಿಕೋನಾಜೋಲ್, ಪ್ರೋಪಿನೆಬ್, ಟೇಬುಕೋನಾಜೋಲ್ ಖರೀದಿಸಿ ಉಪಯೋಗಿಸಿಕೊಂಡಿದ್ದಲ್ಲಿ ಪ್ರಸಕ್ತ ವರ್ಷದಲ್ಲಿ ಖರೀದಿಸಿದ GST ಬಿಲ್, ಜಮೀನಿನ ಅಡಿಕೆ ಬೆಳೆ ಹೋಂದಿರುವ RTC, ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ನೊಂದಿಗೆ ಕಚೇರಿಯಲ್ಲಿ ಲಭ್ಯವಿರುವ ಅರ್ಜಿಯನ್ನು ಭರ್ತಿ ಮಾಡಿ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಲು ಹೊಸನಗರ ಹಿ.ತೋ.ಇ. ನಿರ್ದೇಶಕ ಟಿ.ಸಿ. ಪುಟ್ಟಾನಾಯ್ಕ ಪತ್ರಿಕಾ ಪ್ರಕಟಣೆ ಮೂಲಕ ಕೋರಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಪ್ರತಿ ಫಲಾನುಭವಿಗೆ ಗರಿಷ್ಠ 2 ಹೆಕ್ಟರ್ ವಿಸ್ತೀರ್ಣಕ್ಕೆ ಗರಿಷ್ಠ ₹ 3000 ಸಹಾಯಧನ ನೀಡಲಾಗುವುದು. ರೈತ ಬಾಂಧವರು ಇದರ ಸದುಪಯೋಗ ಪಡೆದುಕೊಳ್ಳಲು ಕೋರಿದ್ದು, ಮುಂದುವರೆದು SC/ST ರೈತರು ಈ ಮೇಲೆ ತಿಳಿಸಿದ ದಾಖಲೆಯೊಂದಿಗೆ ಜಾತಿ ಪ್ರಮಾಣ ಪತ್ರ ನೀಡಲು ಕೋರಲಾಗಿದೆ.

ಇದಲ್ಲದೆ ಕೀಟರೋಗ ನಿಯಂತ್ರಣ ಯೋಜನೆ (NHM) ಅಡಿಯಲ್ಲಿ ಮೈಲುತುತ್ತ ಖರೀದಿಸಿದ ರೈತರು. ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿದಲ್ಲಿ ಪ್ರತಿ ರೈತರಿಗೆ 2 ಹೆಕ್ಟ‌ರ್ ಗರಿಷ್ಠ ₹ 3000 ಸಹಾಯಧನ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ರೈತ ಸಂಪರ್ಕ ಅಧಿಕಾರಿಗಳಿಗೆ ಸಂಪರ್ಕಿಸಲು ತಿಳಿಸಲಾಗಿದೆ.

ರೈತ ಸಂಪರ್ಕ ಕೇಂದ್ರ :

ಕಸಬಾ ಮತ್ತು ಕೆರೆಹಳ್ಳಿ : ಚಂದ್ರಶೇಖರ ಸ.ತೋ.ಅ ಮೊ:- 9481501571

ನಗರ ಮತ್ತು ಹುಂಚ : ರಮೇಶ್ ಹೂಗರ್ ಸ.ತೋ.ಅ ಮೊ :- 9916840682

Leave a Comment