ತೆಂಗಿನಗರಿ ತರಲು ತೋಟಕ್ಕೆ ಹೋಗಿದ್ದ ಬಾಲಕ ನೀರಿನ ಹೊಂಡಕ್ಕೆ ಬಿದ್ದು ಸಾವು !

0 343

ಕಡೂರು : ತೋಟದಲ್ಲಿ ತೆಂಗಿನಗರಿ ತರಲು ಹೋಗಿದ್ದ ಬಾಲಕನೋರ್ವ ನೀರಿನ ಹೊಂಡಕ್ಕೆ ಬಿದ್ದು ಅಸುನೀಗಿರುವ ಘಟನೆ ಬೀರೂರು ಸಮೀಪದ ಮುಂಡ್ರೆಕೊಪ್ಪಲು ಗ್ರಾಮದಲ್ಲಿ ಬುಧವಾರ ನಡೆದಿದೆ.

ಎಂ.ಎ. ತರುಣ್‌ (15) ಮೃತ ದುರ್ದೈವಿಯಾಗಿದ್ದು, ಮಧ್ಯಾಹ್ನ ಸಮಯದಲ್ಲಿ ಊರಿನ ಸಮೀಪದ ರವಿ ಎಂಬುವವರ ತೋಟಕ್ಕೆ ತನ್ನ ಅತ್ತೆಯ ಮಗನೊಂದಿಗೆ ತೆಂಗಿನಗರಿ ತರಲು ತೋಟಕ್ಕೆ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ತೋಟದಲ್ಲಿದ್ದ ನೀರಿನ ಗುಂಡಿಯನ್ನು ಗಮನಿಸಿದೆ ಕಾಲುಜಾರಿ ಬಿದ್ದಿದ್ದಾರೆ.

ನೀರಿನ ಗುಂಡಿಗೆ ಬಿದ್ದ ರಭಸಕ್ಕೆ ಸ್ಥಳದಲ್ಲೇ ತರುಣ್ ಮೃತಪಟ್ಟಿದ್ದಾನೆ. ಬೀರೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.

error: Content is protected !!