ಎರಡು ಬೈಕ್ಗಳ ನಡುವೆ ಅಪಘಾತ ; ಓರ್ವ ಸಾವು !
ರಿಪ್ಪನ್ಪೇಟೆ : ಎರಡು ಬೈಕ್ಗಳ (Bikes) ನಡುವೆ ಡಿಕ್ಕಿ (Accident) ಸಂಭವಿಸಿ ಓರ್ವ ಸಾವಿಗೀಡಾದ (Death) ಘಟನೆ ಸೋಮವಾರ ಸಂಜೆ ಕೋಡೂರು ಗ್ರಾಮದಲ್ಲಿ ನಡೆದಿದೆ.
ಕೋಡೂರಿನ (Kodur) ಕಾಂತಾರ ಹೋಟೆಲ್ ಸಮೀಪದಲ್ಲಿ ಈ ಘಟನೆ ನಡೆದಿದ್ದು ಹೆಚ್. ಕುನ್ನೂರು ಗ್ರಾಮದ ತಗೂಡ್ಲಿ ಲಿಂಗಪ್ಪ (55) ಮೃತ ದುರ್ಧೈವಿಯಾಗಿದ್ದು, ಗಂಭೀರ ಗಾಯಗೊಂಡಿದ್ದ ಈತನನ್ನು ಶಿವಮೊಗ್ಗಕ್ಕೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.
ಮೃತ ಲಿಂಗಪ್ಪನು ಕೋಡೂರಿನ ಹಳೆಕೋಟೆಯಲ್ಲಿರುವ ಮೂಲಗಿರೀಶ್ ಬಾರ್ ಅಂಡ್ ರೆಸ್ಟೋರೆಂಟ್ ಕಡೆಯಿಂದನ ತನ್ನ ಟಿವಿಎಸ್ ಎಕ್ಸ್ಎಲ್ ಬೈಕಿನಲ್ಲಿ ದಿಢೀರನೆ ಮುಖ್ಯ ರಸ್ತೆಗೆ ನುಗ್ಗಿದ್ದರಿಂದ ಕೋಡೂರು ಕಡೆಯಿಂದ ಹೊಸನಗರ ಕಡೆಗೆ ತೆರಳುತ್ತಿದ್ದ ಪಲ್ಸರ್ ಬೈಕ್ ಗುದ್ಜಿ ಈ ಅಪಘಾತ ನಡೆದಿದೆ ಎಂದು ಹೇಳಲಾಗಿದೆ.
ಪಲ್ಸರ್ ಬೈಕಿನಲ್ಲಿದ್ದ ಕೌಶಿಕ್ ಮುತ್ತೂರು ಮತ್ತು ಫಾರೆಸ್ಟ್ ವಾಚರ್ ಬಂಗಾರಪ್ಪ ಪ್ರಯಾಣಿಸುತ್ತಿದ್ದು ಇವರಿಗೂ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ರವಾನಿಸಲಾಗಿದೆ.
ಇದೇ ಸ್ಥಳದಲ್ಲಿ ಕಳೆದ ವರ್ಷ ಮೃತ ಲಿಂಗಪ್ಪ ರವರ ಸಹೋದರ ಶೇಷಪ್ಪ ಎಂಬಾತ ಕೂಡ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದರು.
ಈ ಘಟನೆ ಸಂಬಂಧ ರಿಪ್ಪನ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.