ನೋಡ ನೋಡುತ್ತಿದಂತೆ ಧಗಧಗನೆ ಹೊತ್ತಿ ಉರಿದ ಬಸ್…!

0 42

ಸಾಗರ : ತಾಲ್ಲೂಕಿನ ಆನಂದಪುರಂ ರೈಲ್ವೆ ಗೇಟ್ ಹತ್ತಿರ ಕಳೆದ ಎರಡು ದಿನಗಳಿಂದ ಕೆಟ್ಟು ನಿಂತಿದ್ದ ಗಜಾನನ ಸಾರಿಗೆ ಬಸ್‌ನಲ್ಲಿ ಆಕಸ್ಮಿಕ ಬೆಂಕಿ ತಗುಲಿದ ಘಟನೆ ಸೋಮವಾರ ನಡೆದಿದೆ.


ಎರಡು ದಿನಗಳ ಹಿಂದೆ ಬಸ್ ಹಾಳಾಗಿದ್ದರಿಂದ ರೈಲ್ವೆ ಗೇಟ್ ಸಮೀಪ ನಿಲ್ಲಿಸಲಾಗಿತ್ತು. ಸೋಮವಾರ ಬೆಳಿಗ್ಗೆ ಚಾಲಕ ಮತ್ತು ನಿರ್ವಾಹಕ ಕೆಳಗೆ ಇಳಿದು ಹೋಗಿದ್ದಾಗ ಈ ಘಟನೆ ಸಂಭವಿಸಿದೆ.

ಆಕಸ್ಮಿಕ ಬೆಂಕಿ ತಗುಲಿದ್ದರಿಂದ ಬಸ್ ಶೇ. 75ರಷ್ಟು ಸುಟ್ಟು ಹೋಗಿದೆ. ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ. ಈ ಸಂಬಂಧ ಆನಂದಪುರಂ ಠಾಣೆಯಲ್ಲಿ ದೂರು ದಾಖಲಾಗಿದೆ.

Leave A Reply

Your email address will not be published.

error: Content is protected !!