ಕಸ ಹಾಕುವ ವಿಚಾರಕ್ಕೆ ಗಲಾಟೆ, ಅಣ್ಣನ ಮಗನಿಗೆ ಮನಸೋ ಇಚ್ಚೆ ಚಾಕು ಇರಿತ !
ಶಿವಮೊಗ್ಗ : ಕಸದ ವಿಚಾರವಾಗಿ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ ಅಣ್ಣನ ಮಗನಿಗೇ ಚಾಕು ಇರಿಯುವ ಹಂತಕ್ಕೆ ತಲುಪಿದ ಘಟನೆ ಜಿಲ್ಲೆಯ ಮಂಡೆನಕೊಪ್ಪದಲ್ಲಿ ನಡೆದಿದೆ.
ಅಣ್ಣನ ಮಗ ಆಕಾಶ್ ಗೆ ಉಮೇಶ್ ಎಂಬಾತ ಮನಬಂದಂತೆ ಚಾಕು ಇರಿದಿದ್ದು, ಗಾಯಾಳುವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಸ ಹಾಕುವ ವಿಚಾರಕ್ಕೆ ಉಮೇಶನ ಅಣ್ಣನ ಮಗನ ನಡುವೆ ಆಗಾಗ ಗಲಾಟೆ ಆಗುತ್ತಿತ್ತು. ಇಂದು ಕೂಡ ಇದೇ ವಿಚಾರವಾಗಿ ಗಲಾಟೆ ನಡೆದಿದೆ. ಉಮೇಶ್ ಅಣ್ಣನ ಮಗ ಆಕಾಶ್ ಗೆ ಮನಸೋ ಇಚ್ಛೆ ಚಾಕುವಿನಿಂದ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಆಕಾಶ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿ ಉಮೇಶ್ ನನ್ನು ತುಂಗಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.