ಭೀಕರ ಅಪಘಾತ, ವ್ಯಕ್ತಿ ಸ್ಥಳದಲ್ಲೇ ಸಾವು !

0 1,047

ಸೊರಬ: ಭೀಕರ ಬೈಕ್ ಅಪಘಾತವಾಗಿ ವ್ಯಕ್ತಿಯೋರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸೊರಬದಲ್ಲಿ ಶನಿವಾರ ನಡೆದಿದೆ.

ಸೊರಬ ತಾಲೂಕಿನ ಮಳಲಗದ್ದೆ ಬಸ್ ನಿಲ್ದಾಣದ ಬಳಿಯೇ ಈ ದುರ್ಘಟನೆ ನಡೆದಿದ್ದು, ಮೃತ ವ್ಯಕ್ತಿ ಅದೆ ಗ್ರಾಮದ ಅಧ್ಯಕ್ಷ ಕೃಷ್ಣಪ್ಪ ಎಂದು ಎಂದು ಗುರುತಿಸಲಾಗಿದೆ. ಮಳಲಗದ್ದೆ ಗ್ರಾಮದ ಹಾಲಿನ ಡೈರಿಗೆ ಹಾಲು ಕೊಟ್ಟು ಮುಖ್ಯ ರಸ್ತೆ ಮಾರ್ಗವಾಗಿ ಮನೆ ಕಡೆಗೆ ಬರುತ್ತಿದ್ದರು ಎನ್ನಲಾಗಿದೆ. ರಸ್ತೆ ದಾಟುವಾಗ ಬಲಬದಿಯಿಂದ ಬಂದ ಕೆಎಸ್ಆರ್ಟಿಸಿ ಬಸ್‌ಗೆ ನಡು ರಸ್ತೆಯಲ್ಲೇ ಬೈಕ್ ಗುದ್ದಿದ್ದು, ಈ ವೇಳೆ ವ್ಯಕ್ತಿ ತಲೆ ರಸ್ತೆಗೆ ಅಪ್ಪಳಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಸ್ಥಳಕ್ಕೆ ಸೊರಬ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave A Reply

Your email address will not be published.

error: Content is protected !!