ತಂದೆಯವರಂತೆ ಮುಖ್ಯಮಂತ್ರಿ ಆಗುವ ಅವಕಾಶವು ನಿಮಗಿದೆ ; ಕಿಮ್ಮನೆ
ಶಿವಮೊಗ್ಗ : ಮುಂದಿನ 20 ವರ್ಷಗಳ ಕಾಲ ಪಕ್ಷವನ್ನು ಕಟ್ಟಿ ಬೆಳೆಸುವ ಸಮರ್ಥ ವ್ಯಕ್ತಿ ಸಚಿವರಾಗಿದ್ದಾರೆ ಎಂದು ಮಾಜಿ ಸಚಿವ ಹಾಗೂ ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ ಹೇಳಿದರು.
ಶಿವಮೊಗ್ಗದ ಲಗಾನ್ ಕಲ್ಯಾಣ ಮಂಟಪದಲ್ಲಿ ನೂತನ ಸಚಿವ ಮಧು ಬಂಗಾರಪ್ಪಗೆ ಅಭಿನಂದನ ಸಮಾರಂಭದಲ್ಲಿ ಮಾತನಾಡಿದ ಅವರು, ಮಧು ಬಂಗಾರಪ್ಪ ಸಚಿವರಾಗಿ ಬಂದಿರುವುದು ಖುಷಿ ತಂದಿದೆ. ಈಗಿರುವ ಅವಕಾಶವನ್ನು ನೀವು ಸದ್ಭಳಕೆ ಮಾಡಿಕೊಳ್ಳಬೇಕು. ಆಗ ತಂದೆಯವರಂತೆ ಮುಖ್ಯಮಂತ್ರಿ ಆಗುವ ಅವಕಾಶವು ನಿಮಗಿದೆ. ಬಂಗಾರಪ್ಪನವರು ಪ್ರತಿ ಸಣ್ಣ-ಪುಟ್ಟ ಸಮಾಜವನ್ನ ಜೊತೆಗೆ ಕೊಂಡೊಯ್ಯುವ ಕೆಲಸ ಮಾಡಿದ್ದರು. ಶೋಷಿತರ ಪರವಾಗಿ ನಿಲ್ಲುವ ಕೆಲಸ ಮಾಡಬೇಕೆಂದು ಸಚಿವ ಮಧು ಅವರಿಗೆ ಕಿಮ್ಮನೆ ಕಿವಿಮಾತು ಹೇಳಿದರು.
ಶಿಕ್ಷಣ ಇಲಾಖೆ ಸಾಕಷ್ಟು ಸವಾಲಿನಿಂದ ಕೂಡಿರುತ್ತದೆ. ಇಲಾಖೆಯನ್ನು ಜವಾಬ್ದಾರಿಯಿಂದ ನಿಭಾಯಿಸುವ ಶಕ್ತಿ ಹಾಗೂ ರಾಜಕೀಯ ಹಿನ್ನೆಲೆ ಮಧು ಅವರಿಗಿದೆ. ತಂದೆಯಂತೆ ಜಿಲ್ಲೆಯಲ್ಲಿ ರಾಜಕೀಯ ಹಿಡಿತ ಸಾಧಿಸಿ ಅವರು, ಕಾಂಗ್ರೆಸ್ ಪಕ್ಷದ ತತ್ವ-ಸಿದ್ದಾಂತವನ್ನು ಜನರಿಗೆ ತಲುಪಿಸಿ ಎಂದು ಮಾಜಿ ಸಚುವ ಕಿಮ್ಮನೆ ರತ್ನಾಕರ್ ಈ ಸಂದರ್ಭದಲ್ಲಿ ಹೇಳಿದರು.