ನರಬಲಿ ಪಡೆದ ಚಿರತೆ ಕೊನೆಗೂ ಬೋನಿಗೆ !

0 105

ಶಿವಮೊಗ್ಗ: ಮಹಿಳೆಯೊಬ್ಬರ‍್ನನು ಕೊಂದು ಜನರಲ್ಲಿ ಭಯ ಭೀತಿ ಹುಟ್ಟಿಸಿದ್ದ ಚಿರತೆಯನ್ನು ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.


ನಗರದ ಹೊರವಲಯದ ಬೀರನಕೆರೆ, ಬನ್ನೀಕೆರೆ, ಬಿಕ್ಕೋನಹಳ್ಳಿಗಳಲ್ಲಿ ಚಿರತೆಯೊಂದು ಹಳ್ಳಿಗಳಿಗೆ ನುಗ್ಗಿ ಜನರಲ್ಲಿ ಭಯ ಹುಟ್ಟಿಸಿತ್ತು.

ಬಿಕ್ಕೋನಹಳ್ಳಿಯಲ್ಲಿ ಯಶೋಧಮ್ಮ ಎಂಬ ಮಹಿಳೆಯನ್ನು ಕೊಂದು ಹಾಕಿತ್ತು. ಅರಣ್ಯ ಇಲಾಖೆಯವರು ಅದನ್ನು ಹಿಡಿಯಲು ಹರಸಾಹಸ ಪಟ್ಟಿದ್ದರು.

ಬನ್ನೀಕೆರೆಯಲ್ಲಿ ಹೊಲಕ್ಕೆ ಹೋಗಿದ್ದ ಯುವಕನೊಬ್ಬನಿಗೆ ಚಿರತೆ ಕಂಡಿತ್ತು. ತಕ್ಷಣ ಕಾರ್ಯೋನ್ಮುಖರಾದ ಅರಣ್ಯ ಇಲಾಖೆಯವರು ಬೋನನ್ನು ಸಿದ್ದಪಡಿಸಿದ್ದರು. ಕೊನೆಗೂ ಬಿಕ್ಕೋನಹಳ್ಳಿಯಲ್ಲಿ ನರಹಂತಕ ಚಿರತೆ ಬೋನಿಗೆ ಬಿದ್ದಿದೆ.

Leave A Reply

Your email address will not be published.

error: Content is protected !!