ಮೊಬೈಲ್ ವಿಚಾರಕ್ಕೆ ಯುವಕನಿಗೆ ಚಾಕು ಇರಿತ !

0 561

ಭದ್ರಾವತಿ : ಯುವಕರ ಗುಂಪೊಂದು ಯುವಕನೋರ್ವನಿಗೆ ಚಾಕುವಿನಿಂದ ಇರಿದ ಘಟನೆ ಭದ್ರಾವತಿಯ ಹನುಮಂತನಗರ ಬಡಾವಣೆಯಲ್ಲಿ ನಡೆದಿದೆ.

ನಂದಕುಮಾರ್ (32) ಎಂಬಾತನಿಗೆ ಚಾಕು ಇರಿಯಲಾಗಿದ್ದು, ಗಾಯಾಳುವನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಯುವಕರ ಗುಂಪು ಈ ಕೃತ್ಯ ಎಸಗಿದೆ ಎಂದು ಆರೋಪಿಸಲಾಗಿದೆ. ನಿನ್ನೆ ನಂದಕುಮಾರ್‌ಗೆ ಕರೆ ಮಾಡಿದ್ದ ಗುಂಪು ನಿನ್ನ ಮೊಬೈಲ್‌ ಕೊಡು ಎಂದು ಕೇಳಿದೆ. ಆದರೆ ನಂದಕುಮಾರ್‌ ಮೊಬೈಲ್‌ ಕೊಡೋದಕ್ಕೆ ನಿರಾಕರಿಸಿದ್ದಾನೆ. ಇದರಿಂದಾಗಿ ನಂದಕುಮಾರ್‌ನನ್ನು ಹುಡುಕಿಕೊಂಡು ಹೋಗಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ನಂದಕುಮಾರ್‌ ಪೊಲೀಸ್‌ ಠಾಣೆಗೆ ಹೋಗಿ ದೂರು ಕೊಟ್ಟಿದ್ದಾರೆ. ವಾಪಸ್‌ ಬರುವಾಗ ಮತ್ತೆ ಬಂದ ಗುಂಪು ಚಾಕುವಿನಿಂದ ಬೆನ್ನಿಗೆ ಇರಿದಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ವಾಟ್ಸಾಪ್ ಮೆಸೇಜ್ ನಲ್ಲಿ ಮಾಹಿತಿ ನೀಡಿರುವ ಎಸ್‌ಪಿ ಮಿಥುನ್ ಕುಮಾರ್, ನಿನ್ನೆ ರಾತ್ರಿ ಭದ್ರಾವತಿಯಲ್ಲಿ ಯುವಕನೊಬ್ಬನಿಗೆ ಚೂಪಾದ ವಸ್ತುವಿನಿಂದ ಇರಿಯಲಾಗಿದ್ದು, ಮೈನರ್ ಇಂಜುರಿಯಾಗಿದೆ. ಪ್ರಕರಣ ಸಂಬಂಧ 09 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಮೊಬೈಲ್ ಫೋನ್ ಅಡವಿಟ್ಟಿರುವ ವಿಚಾರದಲ್ಲಿ ಹಾಗೂ ವೈಯಕ್ತಿಕ ಕಾರಣಕ್ಕೆ ಈ ಘಟನೆ ನಡೆದಿದ್ದು, ಇದರಲ್ಲಿ ಯಾವುದೇ ಕೋಮು ವಿಚಾರ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Leave A Reply

Your email address will not be published.

error: Content is protected !!