ಶಿವಮೊಗ್ಗ ಡಿಸಿ ಸೆಲ್ವಮಣಿ ವರ್ಗಾವಣೆ, ನೂತನ ಜಿಲ್ಲಾಧಿಕಾರಿಯಾಗಿ ಗುರುದತ್ತ ಹೆಗ್ಡೆ ನಿಯೋಜನೆ
ಶಿವಮೊಗ್ಗ : ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ವರ್ಗಾವಣೆ (Transfer) ಮಾಡಿ ಸರ್ಕಾರ ಆದೇಶ ನೀಡಿದ್ದು, ಅವರ ಸ್ಥಳದಲ್ಲಿ ಗುರುದತ್ತ ಹೆಗ್ಡೆ ಅವರನ್ನು ಡಿಸಿಯಾಗಿ ನಿಯೋಜಿಸಿದೆ.
ಡಾ. ಆರ್ ಸೆಲ್ವಮಣಿ ಅವರನ್ನ ಬೆಂಗಳೂರು ಇ- ಗೌವರ್ನೆನ್ಸ್ ಸೆಂಟರ್ನ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಆಗಿ ವರ್ಗಾವಣೆ ಮಾಡಲಾಗಿದೆ.
ಶಿವಮೊಗ್ಗ ಜಿಲ್ಲಾಧಿಕಾರಿಯಾಗಿದ್ದ ವೇಳೆ ಡಾ. ಆರ್ ಸೆಲ್ವಮಣಿ ಅವರು ಜನಸಾಮಾನ್ಯರೊಂದಿಗೆ ಬೆರೆಯುತ್ತಿದ್ದ ಕಾರಣದಿಂದ ಇಲ್ಲಿನ ಜನರ ಮೆಚ್ಚುಗೆ ಕಾರಣವಾಗಿದ್ದರು. 2022ರ ಜನವರಿಯಿಂದ ಸೆಲ್ವಮಣಿ ಅವರು ಶಿವಮೊಗ್ಗ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಸದ್ಯ ಅವರನ್ನು ರಾಜ್ಯ ಸರ್ಕಾರ ಬೆಂಗಳೂರಿಗೆ ವರ್ಗಾವಣೆ ಮಾಡಿದೆ.
ಸೆಲ್ವಮಣಿ ಅವರು ಶಿವಮೊಗ್ಗ ಜಿಲ್ಲಾಧಿಕಾರಿಯಾಗಿ ನಿಯೋಜನೆ ಆಗುವ ಮುನ್ನ ಧಾರವಾಡ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಸದ್ಯ ಶಿವಮೊಗ್ಗ ಜಿಲ್ಲಾಧಿಕಾರಿಯಾಗಿ ನಿಯೋಜನೆ ಆಗಿರುವ ಗುರುದತ್ತ ಹೆಗ್ಡೆ ಅವರು 2014ರ ಬ್ಯಾಚ್ ಐಎಎಸ್ ಅಧಿಕಾರಿಯಾಗಿದ್ದಾರೆ.