ಸರ್ಕಾರಿ ಶಾಲೆ ಅಭಿಮಾನ ಸುಣ್ಣ-ಬಣ್ಣ ಅಭಿಯಾನ ಕಾರ್ಯಕ್ರಮಕ್ಕೆ ನಾಳೆ ಚಾಲನೆ
ರಿಪ್ಪನ್ಪೇಟೆ : ಪೋಸ್ಟ್ ಮ್ಯಾನ್ ಬಳಗದ ವತಿಯಿಂದ ಕೈಗೊಂಡಿರುವ ‘ಸರ್ಕಾರಿ ಶಾಲೆ ಅಭಿಮಾನ ಸುಣ್ಣ-ಬಣ್ಣ ಅಭಿಯಾನ’ ಕಾರ್ಯಕ್ರಮಕ್ಕೆ ಅ.11 ರ ಬುಧವಾರ ಬೆಳಗ್ಗೆ 10 ಗಂಟೆಗೆ ಚಂದವಳ್ಳಿ ಶಾಲೆಯಲ್ಲಿ ಚಾಲನೆ ದೊರೆಯಲಿದೆ.
ಸಮಾಜ ಸೇವಕಿ ಕು|| ಕನ್ನಡತಿ ಅಕ್ಕ ಅನು ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಶಾಸಕ ಗೋಪಾಲಕೃಷ್ಣ ಬೇಳೂರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ತೀರ್ಥಹಳ್ಳಿ ಉಪ ವಿಭಾಗದ ಡಿವೈಎಸ್ಪಿ ಗಜಾನನ ವಾಮನ ಸುತಾರ, ಹೊಸನಗರ ತಾಪಂ ಕಾರ್ಯನಿರ್ವಹಣಾಧಿಕಾರಿ ನರೇಂದ್ರ ಕುಮಾರ್, ಹೊಸನಗರ ಬಿಇಒ ಹೆಚ್.ಆರ್ ಕೃಷ್ಣಮೂರ್ತಿ, ಕೆಂಚನಾಲ ಗ್ರಾಪಂ ಅಧ್ಯಕ್ಷ ಉಬೇದುಲ್ಲ ಷರೀಫ್ ಭಾಗವಹಿಸಲಿದ್ದಾರೆ.
ಅಭಿಯಾನದ ಆಯೋಜಕರು:
- ರಫಿ ರಿಪ್ಪನ್ಪೇಟೆ – 9845845844
- ಸಬಾಸ್ಟಿನ್ ಮ್ಯಾಥ್ಯೂಸ್ – 9448722553
- ಉಮೇಶ್ ಸಿ ಜಾಗದ್ದೆ – 9449905981