ಹೊಸನಗರ ; ಅಕ್ರಮವಾಗಿ ಮರಳು ಸಾಗಿಸುತ್ತಿದ್ದ 5 ಟಿಪ್ಪರ್ ಲಾರಿಗಳು ವಶಕ್ಕೆ

0 724

ಹೊಸನಗರ: ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಐದು ಟಿಪ್ಪರ್‌ಗಳನ್ನು ತಹಶೀಲ್ದಾರ್ ರಶ್ಮಿ ಹಾಗೂ ಸರ್ಕಲ್ ಇನ್ಸ್‌ಪೆಕ್ಟರ್ ಗುರಣ್ಣ ಎಸ್ ಹೆಬ್ಬಾಳ್‌ರವರ ಆದೇಶದ ಮೇರೆಗೆ ಸಬ್ ಇನ್ಸ್‌ಪೆಕ್ಟರ್ ರಾಜು ರೆಡ್ಡಿಯವರು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ‌.

ಈ ಕಾರ್ಯಾಚರಣೆಯು ಮಂಗಳವಾರ ರಾತ್ರಿ ದ್ಯಾವರ್ಸ ಶರಾವತಿ ಹಿನ್ನೀರಿನಲ್ಲಿ ಅಕ್ರಮವಾಗಿ ಮರಳು ತುಂಬಿದ ಸಾಗಾಣಿಕೆ ಮಾಡುತ್ತಿದ್ದ ಕೆಎ 47ಎ 1792 ಗಾನ ಗಣೇಶ ಕೋಡೂರು, ಕೆಎ 19ಎಡಿ 2001, ದಿನೇಶ್ ಬಟ್ಟೆಮಲ್ಲಪ್ಪ, ಕೆಎ 15,9703 ಅರಣ್ ಅರಳಿಕೊಪ್ಪ, ಕೆಎ 42 ಕೆ 4198 ಗುರು, ಅಭಿಲಾಷ್ ಚಿಕ್ಕಮಣತಿ ಎಂಬುವವರಿಗೆ ಸೇರಿದ ಒಟ್ಟು 5 ಟಿಪ್ಪರ್‌ ಲಾರಿಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಕಂದಾಯ ಇಲಾಖೆಯ ಸಿಬ್ಬಂದಿಗಳು ಹಾಗೂ ಪೋಲೀಸ್ ಇಲಾಖೆಯ ಗಂಗಣ್ಣ, ಬಟೋಲಿ, ಸುನೀಲ್, ಅವಿನಾಶ್, ಗಣೇಶ್ ಇನ್ನೂ ಮುಂತಾದವರು ಪಾಲ್ಗೊಂಡಿದ್ದರು.

Leave A Reply

Your email address will not be published.

error: Content is protected !!