ಹೊಸನಗರ ನ್ಯಾಯಾಲಯದಲ್ಲಿ ಹುತಾತ್ಮರ ದಿನಾಚರಣೆ

0 449

ಹೊಸನಗರ : ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಇಂದು ಮಹಾತ್ಮ ಗಾಂಧೀಜಿಯವರ ಪುಣ್ಯತಿಥಿ ಹಿನ್ನೆಲೆಯಲ್ಲಿ ಹುತಾತ್ಮರ ದಿನಾಚರಣೆ ಆಚರಿಸಲಾಯಿತು.

ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮೌನಾಚರಣೆ ಮಾಡಿ ಹಾಗೂ ನ್ಯಾಯಾಲಯ ಸಂಕೀರ್ಣವನ್ನು ಸ್ವಚ್ಛತಾ ಅಭಿಯಾನದಲ್ಲಿ ಸ್ವಚ್ಛತೆ ಮಾಡುವುದರ ಮೂಲಕ ಅರ್ಥ ಪೂರ್ಣವಾಗಿ ಆಚರಿಸಲಾಯಿತು.

ಹಿರಿಯ ವ್ಯವಹಾರ ನ್ಯಾಯಾಧೀಶ ಎಂ ಎಸ್ ಸಂತೋಷ್, ನ್ಯಾಯಾಧೀಶ ಕೆ ರವಿಕುಮಾರ್, ಸರ್ಕಾರಿ ಅಭಿಯೋಜಕ ರವಿ ಕೆ, ವಕೀಲರ ಸಂಘದ ಅಧ್ಯಕ್ಷ ವಾಲೆಮನೆ ಶಿವಕುಮಾರ್, ವಕೀಲರುಗಳು ನ್ಯಾಯಾಲಯದ ಕಚೇರಿ ಸಿಬ್ಬಂದಿಗಳು ಪಂಚಾಯತಿಯ ಸಿಬ್ಬಂದಿ ಲಕ್ಷ್ಮಣ್ ಹಾಗೂ ಪೌರಕಾರ್ಮಿಕರಗಳ ನೆರವಿನಿಂದ ನ್ಯಾಯಾಲಯ ಸಂಕೀರ್ಣವನ್ನು ಸ್ವಚ್ಛತಾ ಅಭಿಯಾನದಲ್ಲಿ ಬಳಸಿಕೊಳ್ಳಲಾಗಿತ್ತು.

ಹಿರಿಯ ವ್ಯವಹಾರ ನ್ಯಾಯಾಧೀಶ ಎಂಎಸ್ ಸಂತೋಷ್ ಈ ಸಂದರ್ಭದಲ್ಲಿ ಮಾತನಾಡಿ, ನಮ್ಮ ನಮ್ಮ ಪರಿಸರವನ್ನು ನಾವು ಕಲುಷಿತಗೊಳ್ಳಲು ಬಿಡದೆ ಸ್ವಚ್ಛವಾಗಿಟ್ಟುಕೊಳ್ಳಬೇಕು. ಈ ಪ್ರಕ್ರಿಯೆ ನಮ್ಮ ಮನೆಯಲ್ಲದೆ ನಮ್ಮ ಪರಿಸರದ ಶಾಲಾ – ಕಾಲೇಜ್, ಬಸ್ ನಿಲ್ದಾಣ, ಕಚೇರಿ, ಆಸ್ಪತ್ರೆ, ಮೈದಾನ ಮೊದಲಾದ ಕಡೆ ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಆಸಕ್ತಿ ವಹಿಸಿದಾಗ ಮಾತ್ರ ಬದ್ಧತೆ ದೃಢಗೊಳ್ಳಲಿದೆ. ಇದು ಕೇವಲ ದಿನಾಚರಣೆಯಂದು ಮಾತ್ರವಲ್ಲದೆ ಈ ಪ್ರಕ್ರಿಯೆ ನಿಯಂತ್ರವಾಗಿರಬೇಕು. ಸ್ವಚ್ಛತಾ ಕಾರ್ಯಗಳಿಗೆ ಸಾಮೂಹಿಕ ಸ್ಪರ್ಶ ದೊರೆತಾಗ ಮಾತ್ರ ಬದ್ಧತೆ ಸದೃಢವಾಗಲಿದೆ ಎಂದರು.

Leave A Reply

Your email address will not be published.

error: Content is protected !!