ಹೊಸನಗರ ಪೊಲೀಸರ ಭರ್ಜರಿ ಕಾರ್ಯಾಚರಣೆ, ಅಕ್ರಮವಾಗಿ ಮರಳು ಸಾಗಿಸುತ್ತಿದ್ದ 4 ಟಿಪ್ಪರ್ ಲಾರಿ ವಶಕ್ಕೆ

0 716

ಹೊಸನಗರ: ತಾಲ್ಲೂಕಿನಲ್ಲಿ ಅಕ್ರಮವಾಗಿ ಮರಳು ದಂಧೆ ಎಗ್ಗಿಲ್ಲದೆ ನಡೆಯುತ್ತಿದ್ದು ಖಚಿತ ಮಾಹಿತಿ ಮೇರೆಗೆ ಹೊಸನಗರ ಸಬ್ ಇನ್ಸ್‌ಪೆಕ್ಟರ್ ರಾಜರೆಡ್ಡಿಯವರ ನೇತೃತ್ವದ ತಂಡ ನಾಲ್ಕು ದಿನಗಳಿಂದ ಹಗಲು-ರಾತ್ರಿ ಗಸ್ತು ತಿರುಗುತ್ತಿದ್ದಾರೆ.

ಈ ವೇಳೆಯಲ್ಲಿ ದಿನೇಶ ಮುಡುಬಾ ಎಂಬುವವರಿಗೆ ಸೇರಿದ KA 19 AD 2001, ಸುರೇಂದ್ರ ಎಂಬುವವರಿಗೆ ಸೇರಿದ KA 01 BB 8103, ರಮೇಶ್ ಬಾಣಿಗ ಎಂಬುವವರಿಗೆ ಸೇರಿದ KA 15 A 0890 ಹಾಗೂ ಸುರೇಶ್ ಎಂಬುವವರಿಗೆ ಸೇರಿದ KA 18 C 3499 ಸೇರಿದಂತೆ ಒಟ್ಟು 4 ಟಿಪ್ಪರ್‌ ಲಾರಿಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ದಾಳಿ ಸಂದರ್ಭದಲ್ಲಿ ಸಿಬ್ಬಂದಿಗಳಾದ ಅವಿನಾಶ್, ಸುನೀಲ್, ಗಂಗಪ್ಪ ಇನ್ನೂ ಮುಂತಾದವರು ಇದ್ದರು.

Leave A Reply

Your email address will not be published.

error: Content is protected !!