Hosanagara | ನೋಡುಗರ ಮನ ತಣಿಸುತ್ತಿದೆ ದಸರಾ ಗೊಂಬೆಗಳ ಪ್ರದರ್ಶನ

0 297

ಹೊಸನಗರ: ಗಣಪತಿ ಹಬ್ಬದ ಸಂದರ್ಭದಲ್ಲಿ ಒಂದು ತಿಂಗಳುಗಳ ಕಾಲ ಸಾವಿರಾರು ಗಣಪತಿ ಮಾರ್ತಿಗಳನ್ನು ಸಂಗ್ರಹಿಸಿ ನೋಡುಗಾರರಿಗೆ ಪ್ರದರ್ಶನಕ್ಕೆ ಇಟ್ಟು ಬಂದವರಿಗೆ ಪ್ರಸಾದ ವಿತರಿಸಿ ಸಾರ್ವಜನಿಕರಿಂದ ಪ್ರಶಂಸೆಗೆ ಒಳಗಾಗಿರುವ ಗೀತಾ ವಿನಾಯಕ ಕೆ.ಎಸ್‌ರವರ ಮನೆಯಲ್ಲಿ ಈಗ ದಸರಾ ಹಬ್ಬದ ಪ್ರಯುಕ್ತ 9 ದಿನಗಳ ಕಾಲ ಗೊಂಬೆಗಳ ಪ್ರದರ್ಶಕ್ಕೆ ಇಡಲಾಗಿದ್ದು ನೋಡುಗರ ಮನ ತಣಿಸುತ್ತಿದೆ.

ಗುರು ಹಿರಿಯರು ಸಂಗ್ರಹಿಸಿರುವ ಹಾಗೂ ಹಿಂದಿನವರು ಪೂಜಿಸುತ್ತಿರುವ ಪಟ್ಟದ ಗೊಂಬೆ, ಆನೆ, ಒಂಟೆ, ಜಿರಾಫೆ, ಮಹಾತ್ಮ ಗಾಂಧೀಜಿ, ನೆಹರು, ಕೃಷ್ಣ, ಇಂದಿನ ಮಣ್ಣಿನ ಗೊಂಬೆಗಳು, ಆಟದ ಸಾಮಾಗ್ರಿಗಳು, ಶಾರದಾ ಮಾತೆ, ಲಕ್ಷ್ಮಿ, ಗಣಪತಿ ಕಲಶ, ಶಿಲಾಬಾಲಕಿಯರು, ಪುಟ್ಟ-ಪುಟ್ಟ ಮಕ್ಕಳ ಚಿತ್ರ, ಮಕ್ಕಳ ಗೊಂಬೆಗಳು, ಆಟಿಕೆ ಸಾಮಾಗ್ರಿಗಳನ್ನು ಸಂಗ್ರಹಿಸಿ ಪೂಜಿಸಲಾಗುತ್ತಿದೆ.

ಆಸಕ್ತರು ನೆಹರು ರಸ್ತೆಯಲ್ಲಿರುವ ನಮ್ಮ ಮನೆಗೆ ಭೇಟಿ ನೀಡಿ ಗೊಂಬೆಗಳನ್ನು ವೀಕ್ಷಿಸಿ ತಮ್ಮ ಮನತಣಿಸಿಕೊಳ್ಳಬೇಕೆಂದು ಗೀತಾ ವಿನಾಯಕರವರು ಕೇಳಿಕೊಂಡಿದ್ದಾರೆ.

Leave A Reply

Your email address will not be published.

error: Content is protected !!