Sagara | ಗಣಪತಿ ಕೆರೆಯಲ್ಲಿ ಅಪರಿಚಿತ ಯುವಕನ ಶವ ಪತ್ತೆ !
ಸಾಗರ: ಇಲ್ಲಿನ ಗಣಪತಿ ಕೆರೆಯಲ್ಲಿ ಇಂದು ಬೆಳಗ್ಗೆ ಸುಮಾರು 25 ವರ್ಷದ ಅಪರಿಚಿತ ಯುವಕನ ಶವ ಪತ್ತೆಯಾಗಿದೆ.
ಕೆರೆಯಲ್ಲಿ ಮುಳುಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಯುವಕ ಒಂದು ದಿನದ ಹಿಂದೆ ಕೆರೆಯಲ್ಲಿ ಬಿದ್ದಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಯುವಕ ಯಾವ ಊರಿನವನು ಎಂದು ಈತನಕ ಪತ್ತೆಯಾಗಿಲ್ಲ.
ಈತ ಆತ್ಮಹತ್ಯೆ ಮಾಡಿಕೊಂಡಿದ್ದಾನೋ, ಇನ್ಯಾರೋ ಕೆರೆಗೆ ತಳ್ಳಿದ್ದಾರೋ ಎನ್ನುವುದು ತನಿಖೆಯಿಂದ ಮಾತ್ರವೇ ತಿಳಿದು ಬರಬೇಕಾಗಿದೆ.
ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಗಳು ಶವವನ್ನು ಮೇಲಕ್ಕೆತ್ತಿ ಉಪವಿಭಾಗೀಯ ಆಸ್ಪತ್ರೆಗೆ ಸಾಗಿಸಿದ್ದು ಶವಪರೀಕ್ಷೆ ನಡೆಸಲಾಗಿದೆ.