ಉರುಳಿ ಬಿದ್ದ ತೆಂಗಿನ ಮರ ; ಸಿಮೆಂಟ್ ಗೋದಾಮು, ಕಾರ್ ಶೆಡ್ಗೆ ಹಾನಿ
ಸೊರಬ : ಪಟ್ಟಣದ ಆನೆಮುಡಿಕೆ ರಸ್ತೆಯಲ್ಲಿ ಬಿರುಸಿನ ಗಾಳಿ ಮಳೆಗೆ ತೆಂಗಿನ ಮರವೊಂದು ಉರುಳಿ ಬಿದ್ದು, ಸಿಮೆಂಟ್ ಗೋದಾಮು ಹಾಗೂ ಕಾರ್ ಶೆಡ್ಗೆ ಹಾನಿಯಾಗಿದೆ.
ಕಾಕಡೆ ಕುಟುಂಬಸ್ಥರ ಮನೆಯ ಹಿಂಭಾಗದ್ದ ಬೃಹತ್ ಗಾತ್ರದ ತೆಂಗಿನ ಮರವೊಂದು ಸೋಮವಾರ ಬೆಳಗಿನ ಜಾವ ಉರುಳಿ ಬಿದ್ದಿದೆ. ಪರಿಣಾಮ ಗೋದಾಮಿನಲ್ಲಿದ್ದ ಶ್ರೀ ರೇಣುಕಾಂಬ ಟ್ರೇಡರ್ಸ್ ನ ತೇಜಪ್ಪ ಅವರಿಗೆ ಸೇರಿದ ಸುಮಾರು 50 ಚೀಲ ಸಿಮೆಂಟ್ ಮಳೆ ನೀರಿಗೆ ಹಾನಿಯಾಗಿದ್ದು, ಗೋದಾಮು ಸಹ ಜಖಂ ಆಗಿದೆ.
ವಿಡಿಯೋ ವೀಕ್ಷಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. https://fb.watch/lZSNxzX2ku/?mibextid=MGVWDh
ವಿಶ್ವನಾಥ ಎಂಬುವವರ ವಾಸದ ಮನೆ ಹಿಂಭಾಗದ ಕಾರು ಶೆಡ್ ಮೇಲೆ ಮರ ಬಿದ್ಧ ಪರಿಣಾಮ ಶೆಡ್ನಲ್ಲಿದ್ದ ಕಾರು ಸೇರಿದಂತೆ ಗೋದಾಮಿಗೆ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಜೀವ ಹಾನಿಯಾಗಿಲ್ಲ.
ಇನ್ನು ಮರವು ವಿದ್ಯುತ್ ತಂತಿಯ ಮೇಲೆಯೂ ಬಿದ್ದಿದ್ದು, ಆನೆಮುಡಿಕೆ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.