M.Sc ಬಯೋ ಕೆಮಿಸ್ಟ್ರಿಯಲ್ಲಿ ರಚನಾಗೆ ಮೊದಲನೇ ಮತ್ತು ಸಿಂಚನಾಗೆ 4ನೇ ರ್ಯಾಂಕ್
ತೀರ್ಥಹಳ್ಳಿ : ಕುವೆಂಪು ವಿಶ್ವ ವಿದ್ಯಾನಿಲಯದಲ್ಲಿ 2022 ರಲ್ಲಿ ನಡೆದ ಸ್ನಾತಕೋತ್ತರ ಬಯೋ ಕೆಮಿಸ್ಟ್ರಿ ಪದವಿ ಪರೀಕ್ಷೆಯಲ್ಲಿ ರಚನಾ ರಾಜೇಶ್ ಆರ್. ನಾಯಕ್ ಮೊದಲ ರ್ಯಾಂಕ್ ಗಳಿಸಿದ್ದಾರೆ.
ಇವರು ತೀರ್ಥಹಳ್ಳಿ ತಾಲ್ಲೂಕು ಹುಂಚದಕಟ್ಟೆ ಗ್ರಾಮ ಪಂಚಾಯತ್ ಸದಸ್ಯೆ ಕಲಾವತಿ ಆರ್. ನಾಯಕ್ ಮತ್ತು ರಾಜೇಶ್ ಆರ್. ನಾಯಕ್ ರವರ ಪುತ್ರಿಯಾಗಿದ್ದಾರೆ.
ಇನ್ನೂ ಇದೇ ವಿಭಾಗದಲ್ಲಿ ಸಿಂಚನಾ ಮುರುಗರಾಜ್ ರವರು 4ನೇ ರ್ಯಾಂಕ್ ಗಳಿಸಿದ್ದಾರೆ. ಇವರು ತೀರ್ಥಹಳ್ಳಿ ತಾಲ್ಲೂಕಿನ TAPCMS ನಿರ್ದೇಶಕಿ ನಾಗರತ್ನ ಮುರುಗರಾಜ್, ಪತ್ರಕರ್ತ ಮುರುಗರಾಜ್ ಕೋಣಂದೂರು ಇವರ ಪುತ್ರಿಯಾಗಿದ್ದಾರೆ.