ನಕ್ಸಲ್ ನಾಯಕ  ಬಿ.ಜಿ.ಕೃಷ್ಣಮೂರ್ತಿ ವಿಚಾರಣೆ ಫೆ.29ಕ್ಕೆ ನಿಗದಿ

0 289

ಶಿವಮೊಗ್ಗ : ನಕ್ಸಲ್ ನಾಯಕ  ಬಿ.ಜಿ.ಕೃಷ್ಣಮೂರ್ತಿಯವರ ಮೇಲಿರುವ ಆಗುಂಬೆ ಠಾಣಾ ವ್ಯಾಪ್ತಿಯ ಪ್ರಕರಣಗಳ ವಿಚಾರಣೆಯನ್ನು ಶಿವಮೊಗ್ಗ ಜಿಲ್ಲಾ ನ್ಯಾಯಾಲಯ ಫೆ.29ಕ್ಕೆ ನಿಗದಿಪಡಿಸಿದೆ.


ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2007 ಮತ್ತು 2009ರಲ್ಲಿ ಬಸ್ ಸುಟ್ಟು ಹಾಕಿದ್ದ ಮತ್ತು ಗೇಟ್ ಬ್ಲಾಸ್ಟ್ ಮಾಡಿದ್ದ ಹಾಗೂ ಅರುಣ್‌ಕುಮಾರ್ ಎಂಬುವವರ ಮನೆಯಲ್ಲಿ ದರೋಡೆ ಪ್ರಕರಣದ ಕುರಿತಂತೆ ಶಿವಮೊಗ್ಗ ನ್ಯಾಯಾಲಯದಲ್ಲಿ ಆರೋಪ ಪಟ್ಟಿಯನ್ನು ಚಾರ್ಜ್ ಮಾಡಲಾಗಿದೆ.

ವಿಡಿಯೋ ನೋಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://www.facebook.com/share/v/QDTjpBaJSxEF1DHa/?mibextid=jmPrMh


ಈ ಚಾರ್ಜ್ ಅನ್ನು ಸುಳ್ಳು ಆರೋಪ ಎಂದು ಬಿ.ಜಿ.ಕೃಷ್ಣಮೂರ್ತಿ ನ್ಯಾಯಾಧೀಶರ ಮುಂದೆ ಹೇಳಿದ್ದರಿಂದ ಸಾಕ್ಷಿಗಳ ವಿಚಾರಣೆಗೆ ಫೆ.29ರಂದು ನಿಗದಿ ಮಾಡಿದ್ದಾರೆ.

14 ವರ್ಷಗಳ ಹಿಂದಿನ 5 ಪ್ರಕರಣ ಗಳಲ್ಲಿ 3 ಚಾರ್ಜ್ ಅಗಿದೆ. ಇನ್ನೆರೆಡು ಎಫ್.ಐ.ಆರ್. ಹಂತದಲ್ಲಿದೆ.
ಬಾಡಿ ವಾರಂಟ್ ಮೇಲೆ ಶಿವಮೊಗ್ಗ ನ್ಯಾಯಾಲಯಕ್ಕೆ ಆರೋಪಿ ಬಿ.ಜಿ.ಕೆ. ಅವರನ್ನು ಹಾಜರುಪಡಿಸಲಾಗಿತ್ತು. ನಾಳೆ ಬೆಳಿಗ್ಗೆ ಅವರನ್ನು ಮತ್ತೆ ಕೇರಳದ ತ್ರಿಶೂರ್ ಜೈಲಿಗೆ ರಿಮ್ಯಾಂಡ್ ಮಾಡಲಾಗಿದೆ ಎಂದು ಅವರ ಪರ ವಕೀಲರಾದ ಶ್ರೀಪಾಲ್ ಅವರು ಮಾಹಿತಿ ನೀಡಿದ್ದಾರೆ.

Leave A Reply

Your email address will not be published.

error: Content is protected !!