ಪ್ರೇಮಿಗಳ ನಡುವೆ ಕಿರಿಕ್, ಯುವತಿಗೆ ಚಾಕು ಇರಿತ !
ಶಿವಮೊಗ್ಗ : ಪ್ರೇಮಿಗಳ ನಡುವೆ ಕಿರಿಕ್ ಆಗಿ ಹಾಡೋನಹಳ್ಳಿಯ ಯುವಕ ಚೇತನ್ ಅದೇ ಗ್ರಾಮದ ಯುವತಿ ಅಂಬಿಕಾಳಿಗೆ ಚಾಕುವಿನಿಂದ ಇರಿದ ಘಟನೆ ಇಂದು ಮಧ್ಯಾಹ್ನ ನಗರದ ಶಿವಪ್ಪನಾಯಕ ವೃತ್ತದ ಬಳಿ ನಡೆದಿದೆ.
ಇರಿತಯೊಳಕ್ಕಾದ ಯುವತಿಯನ್ನು ಸ್ಥಳದಲ್ಲಿದ್ದ ಸಾರ್ವಜನಿಕರ ಸಹಾಯದಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಯುವಕನಿಗೆ ಸಾರ್ವಜನಿಕರು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಆತ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದು ಕೋಟೆ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಪ್ರಕರಣ ದಾಖಲಿಸಲಾಗಿದೆ.
ಘಟನಾ ವಿವರ:
ಶಿವಮೊಗ್ಗ ಹೊರವಲಯದ ಹೊಳಲೂರು ಸಮೀಪದ ಹಾಡೋನಹಳ್ಳಿಯ ಈ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದ್ದು, ಯುವಕ ಶಿವಮೊಗ್ಗ ಆಟೋ ಕಾಂಪ್ಲೆಕ್ಸ್ ನಲ್ಲಿ ವರ್ಕ್ ಶಾಪ್ ಒಂದರ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದ ಎನ್ನಲಾಗಿದೆ.
ಇಂದು ಮಧ್ಯಾಹ್ನ 2:32 ಹೊತ್ತಿಗೆ ಈ ಘಟನೆ ನಡೆದಿದ್ದು ಅದೇ ಗ್ರಾಮದ ಯುವತಿಗೆ ಚಾಕುವಿನಿಂದ ಇರಿದು ಕಾಲ್ಕಿತ್ತಿದ್ದಾನೆ. ತಕ್ಷಣ ಸಾರ್ವಜನಿಕರು ಆತನನ್ನು ಹಿಡಿದು ಕೋಟೆ ಪೊಲೀಸರಿಗೆ ಒಪ್ಪಿಸಿದ್ದಾರೆ.
ಆಕೆ ಸಹ ಮನೆಯಲ್ಲಿಯೇ ಇರುತ್ತಿದ್ದಳು ಎನ್ನಲಾಗಿದ್ದು, ಪ್ರೀತಿಗೆ ಎರಡು ಮನೆಯವರು ಒಪ್ಪಿಕೊಂಡಿಲ್ಲ ಎನ್ನುವುದು ಒಂದು ಕಡೆಯ ನಿಲುವಾದರೆ ಮತ್ತೊಂದು ಕಡೆ ಯುವತಿ ಯುವಕನ ಬಗ್ಗೆ ಅಸಮಾಧಾನ ಹಾಗೂ ಆಕ್ರೋಶ ಹೊಂದಿದ್ದಳು ಎನ್ನವಾಗಿದೆ. ಈ ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಾಗಿದೆ.