Hosanagara | ದಾಸ್ತಾನು ಮಾಡಿದ್ದ ಅಕ್ರಮ ಮರಳು ವಶಕ್ಕೆ
ಹೊಸನಗರ: ಹೊಸನಗರ ಸರ್ಕಲ್ ಇನ್ಸ್ಪೆಕ್ಟರ್ ಗುರಣ್ಣ ಎಸ್ ಹೆಬ್ಬಾಳ್ರವರ ನೇತೃತ್ವದಲ್ಲಿ ಹೊಸನಗರ-ಸಾಗರಕ್ಕೆ ಹೋಗುವ ಮಾರ್ಗದಲ್ಲಿರುವ ಈಚಲಕೊಪ್ಪ-ಪುರಪ್ಪೆಮನೆ ಗ್ರಾಮಗಳ ಹತ್ತಿರ ಶರಾವತಿ ನದಿಯಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿದ್ದಾರೆ ಎಂಬ ಮಾಹಿತಿಯ ಮೇರೆಗೆ ಪೊಲೀಸ್ ಸಿಬ್ಬಂದಿಗಳ ಸಹಕಾರದೊಂದಿಗೆ ದಾಳಿ ನಡೆಸಿ ಸುಮಾರು 5 ಟಿಪ್ಪರ್ನಷ್ಟು ಅಕ್ರಮವಾಗಿ ದಾಸ್ತಾನು ಮಾಡಿದ್ದ ಮರಳನ್ನು ಜಪ್ತಿ ಮಾಡಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸೂಕ್ತ ಕ್ರಮಕ್ಕಾಗಿ ಕೋರಿದ್ದಾರೆ.