ಬೆಂಕಿ ತಗುಲಿ ಜಾನುವಾರು ಕೊಟ್ಟಿಗೆ ಸುಟ್ಟು ಭಸ್ಮ !

0 797

ತೀರ್ಥಹಳ್ಳಿ : ಆಕಸ್ಮಿಕವಾಗಿ ಬೆಂಕಿ (Fire) ತಗುಲಿ ನಂಟೂರು ಗ್ರಾಮದ ನಿಲುವಾನಿ ಶ್ರೀನಿವಾಸ ಗೌಡ ಅವರ ಜಾನುವಾರು ಕೊಟ್ಟಿಗೆ (Cow Shed) ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ಇಂದು ಬೆಳಗ್ಗೆ ನಡೆದಿದೆ.

ದನ, ಎಮ್ಮೆಗಳಿಗೆ ಕಟ್ಟಿದ್ದ ಹಗ್ಗಗಳನ್ನು ತಕ್ಷಣ ಕತ್ತರಿಸಿದ್ದರಿಂದ ಜೀವ ಹಾನಿ ಸಂಭವಿಸಿಲ್ಲ. ಕೊಟ್ಟಿಗೆಯ ಚಾವಣಿಗೆ ಹಾಕಿದ್ದ ಪಕಾಸಿ ಸೇರಿದಂತೆ 300ಕ್ಕೂ ಹೆಚ್ಚು ಹುಲ್ಲಿನ ಪಿಂಡಿ ನಾಶವಾಗಿವೆ.

ವಿಷಯ ತಿಳಿದ ಗ್ರಾಮಸ್ಥರು ಬೆಂಕಿ ನಂದಿಸುವ ಕಾರ್ಯಕ್ಕೆ ನೆರವಾದರು. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ಸಂಪೂರ್ಣ ನಂದಿಸುವಲ್ಲಿ ಯಶಸ್ವಿಯಾದರು.

Leave A Reply

Your email address will not be published.

error: Content is protected !!